എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಮನಸ್ಸಿದ್ದರೆ ಮಾರ್ಗ

ಮನಸ್ಸಿದ್ದರೆ ಮಾರ್ಗ


ರಾಮಪುರ ಎಂಬ ಹಳ್ಳಿಯಲ್ಲಿ ಲಕ್ಷ್ಮಿ ಎಂಬ ಚಿಕ್ಕ ಹುಡುಗಿಯಿದ್ದಳು. ಅವಳು ಸಣ್ಣ ಗುಡಿಸಲಿನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಬಡತನದ ಹೊರತಾಗಿ ಲಕ್ಷ್ಮಿಯ ಮನಸ್ಸು ತುಂಬಾ ಕನಸುಗಳಿಂದ ತುಂಬಿ ತುಳುಕುತ್ತಿತ್ತು.

ಲಕ್ಷ್ಮಿಗೆ ವೈದ್ಯರಾಗಲು ಆಸಕ್ತಿಯಿತ್ತು. ಅಗತ್ಯವಿರುವವರಿಗೆ ತನ್ನಿಂದಾಗುವ ಸಹಾಯ ಮಾಡಲು ಮತ್ತು ತನ್ನ ಹಳ್ಳಿಯವರಿಗೆ ಚಿಕಿತ್ಸೆ ನೀಡಲು ಅವಳಿಗೆ ಅವಸರವಾಗುತ್ತಿತ್ತು. ಅವಳು ಬಿಡುವಿನ ವೇಳೆಯಲ್ಲಿ ಅಧ್ಯಯನ ಮಾಡುತ್ತಿದ್ದಳು. ಅವಳು ಹಳ್ಳಿಯ ಬೇರೆ ಮಕ್ಕಳಿಂದ ಅವರ ಹಳೆಯ ಪುಸ್ತಕಗಳನ್ನು ಕೇಳಿ ಪಡೆಯುತ್ತಿದ್ದಳು ಮತ್ತು ಹಳ್ಳಿಯ ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿದ್ದಳು.

ಹಳ್ಳಿಯ ಅನೇಕರು ಲಕ್ಷ್ಮಿಯ ಕಲಿಕೆಯನ್ನು ಮತ್ತು ಅವಳ ಗುರಿಯನ್ನು ಅನುಮಾನಿಸಿದರು. ಬಡ ಹುಡುಗಿ ಅಂತಹ ಶೇಷ್ಠತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಅವರು ಆಡುವ ಅಂತಹ ಮಾತುಗಳನ್ನು ಕೇಳಿ ಲಕ್ಷ್ಮಿಗೆ ಬೇಸರವಾಗುತ್ತಿತ್ತು. ಆದರೆ ಅವಳು ಅವರ ಮಾತನ್ನು ಕೇಳಲು ನಿರಾಕರಿಸಿದಳು. ಅವಳು ತನ್ನ ಕುಟುಂಬವನ್ನು ನೋಡಿಕೊಳ್ಳಲು ಮತ್ತು ಅವಳ ಶಿಕ್ಷಣಕ್ಕೆ ಬೇಕಾಗಿ ಪೇಟೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡುತ್ತ ದಣಿವರಿಯಿಲ್ಲದೆ ದುಡಿದಳು.

ವರ್ಷಗಳು ಕಳೆದವು. ಹಾಗೆಯೇ ಲಕ್ಷ್ಮಿಯ ಕಠಿಣ ಪರಿಶ್ರಮವು ಫಲ ನೀಡಿತು. ಅವಳು ಶ್ರೀ ಶಾರದಾ ವೈದ್ಯಕೀಯ ಶಾಲೆಗೆ ವಿದ್ಯಾರ್ಥಿವೇತನವನ್ನು ಗಳಿಸಿದಳು. ಅಲ್ಲಿ ಅವಳು ಚೆನ್ನಾಗಿ ಕಲಿತಳು. ಅಲ್ಲಿ ಒಳ್ಳೆಯ ಪದವಿ ಪಡೆದು ಒಳ್ಳೆಯ ವೈದ್ಯರಾಗಿ ತನ್ನ ಹಳ್ಳಿಗೆ ಬಂದಳು.

ಲಕ್ಷ್ಮಿಯ ಕ್ಲಿನಿಕ್ ಬೇಗನೆ ಸಮುದಾಯಕ್ಕೆ ಭರವಸೆಯ ದಾರಿದೀಪವಾಯಿತು. ಅವಳು ಅಗತ್ಯವಿರುವವರಿಗೆ ಅವಳಿಂದಾಗುವ ಸಹಾಯ ಮಾಡಿದಳು ಮತ್ತು ಅವಳು ತನ್ನ ಹಳ್ಳಿಯ ಜನರಿಗೆ ಚಿಕಿತ್ಸೆ ನೀಡಿದಳು. ಅವಳ ಚಿಕ್ಕದಿನಿಂದಿರುವ ಕನಸು ನನಸಾಯಿತು ಮತ್ತು ಅವಳು ದೃಢಸಂಕಲ್ಪ ಮತ್ತು ಹೃದಯದಿಂದ ಬಡ ಹೆಣ್ಣು ಮಕ್ಕಳು ಸಹ ಶೇಷ್ಠತೆಯನ್ನು ಸಾಧಿಸಬಹುದೆಂದು ಸಾಬಿತುಪಡಿಸಿದಳು.



Sneha
9B എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത