എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ) | |
---|---|
![]() | |
വിലാസം | |
ധർമത്തടുക്ക ധർമത്തടുക്ക പി.ഒ. , 671324 , കാസർഗോഡ് ജില്ല | |
സ്ഥാപിതം | 03 - 11 - 1934 |
വിവരങ്ങൾ | |
ഫോൺ | 04998 264700 |
ഇമെയിൽ | aupsdharmathadka@gmail.com |
കോഡുകൾ | |
സ്കൂൾ കോഡ് | 11257 (സമേതം) |
യുഡൈസ് കോഡ് | 32010100611 |
വിക്കിഡാറ്റ | Q87645667 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | കാസർഗോഡ് |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | പുത്തിഗെ പഞ്ചായത്ത് |
വാർഡ് | 2 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം |
പഠന വിഭാഗങ്ങൾ | എൽ.പി യു.പി |
സ്കൂൾ തലം | 1 മുതൽ 7 വരെ 1 to 7 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 122 |
പെൺകുട്ടികൾ | 153 |
ആകെ വിദ്യാർത്ഥികൾ | 275 |
സ്കൂൾ നേതൃത്വം | |
പ്രധാന അദ്ധ്യാപകൻ | N Mahalinga Bhat |
പി.ടി.എ. പ്രസിഡണ്ട് | Ashoka N |
എം.പി.ടി.എ. പ്രസിഡണ്ട് | Chandravathi K |
അവസാനം തിരുത്തിയത് | |
03-01-2022 | Ajamalne |
ചരിത്രം (ಇತಿಹಾಸ)
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪುತ್ತಿಗೆ ಪಂಚಾಯತಿನ ಎರಡನೆ ವಾರ್ಡಿನಲ್ಲಿ ಧರ್ಮತ್ತಡ್ಕ ಎ.ಯು.ಪಿ ಶಾಲೆ ಇದೆ. ಇದು ಮಂಜೇಶ್ವರ ಉಪಜಿಲ್ಲೆಗೆ ಒಳಪಟ್ಟ ಶಾಲೆಯಾಗಿದೆ. ಪ್ರಕೃತಿ ರಮಣೀಯವಾದ ಪೊಸಡಿಗುಂಪೆಯ ತಪ್ಪಲಲ್ಲಿದ್ದು ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ 1934 ರಲ್ಲಿ ನೇರೋಳು ನಿಡುವಜೆ ರಾಮಚಂದ್ರ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಈ ಶಾಲೆಯು ಊರಿನವರ ಪ್ರೋತ್ಸಾಹದಿಂದ 1957 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಹೊಂದಿತು. 2005 ರಲ್ಲಿ ಈ ಶಾಲೆಯು ಭಾಷಾ ಅಲ್ಪಸಂಖ್ಯಾತ ಶಾಲೆಯಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು. 80 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡಿ ಸುಸಂಸ್ಕೃತ ಸಮಾಜವನ್ನು ರೂಪೀಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
2.29 ಎಕರೆ ಸ್ಥಳದಲ್ಲಿ ಈ ವಿದ್ಯಾಲಯವು ಸ್ಥಾಪಿಸಲ್ಪಟ್ಟಿದೆ.ಶಾಲೆಯ ಒಂದು ಹಾಲ್ ಪ್ರಿ ಕೆ.ಇ.ಆರ್ ಕಟ್ಟಡವಾಗಿದ್ದು ಅದರಲ್ಲಿ ಯಲ್.ಪಿ.ವಿಭಾಗದ ನಾಲ್ಕು ತರಗತಿಗಳು ಕಾರ್ಯವೆಸಗುತ್ತಿವೆ. ಉಳಿದ ಮೂರು ಕಟ್ಟಡಗಳು ಹಾಲ್ ಗಳಾಗಿವೆ. ಅದರಲ್ಲಿ ಯು.ಪಿ.ವಿಭಾಗದ ತರಗತಿಗಳು (5,6,7) ನಡೆಯುತ್ತಿದೆ. ಶಾಲೆಯಲ್ಲಿ ಒಂದು ಕಂಪ್ಯೂಟರ್ ಲ್ಯಾಬ್ ಇದ್ದು ಒಂದು ಲ್ಯಾಪ್ ಟಾಪ್ , ನಾಲ್ಕು ಡೆಸ್ಕ್ ಟಾಪ್ ಕಂಪ್ಯೂಟರುಗಳು ಮತ್ತು ಒಂದು ಪ್ರಿಂಟರ್ ಇದೆ. ಶಾಲೆಗೆ ದೂರವಾಣಿ ಸಂಪರ್ಕವಿದ್ದು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಕರ್ಯ ಇದೆ. ಇದು 2016 ನವೆಂಬರ್ ತಿಂಗಳಿನಿಂದ ಐಟಿ @ ಸ್ಕೂಲ್ ಯೋಜನೆಗೆ ಪರಿವರ್ತನೆಗೊಂಡಿದೆ.ಶಾಲೆಗೆ ವಿಶಾಲವಾದ ಆಟದ ಬಯಲು ಇದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಹಾಗೂ ಪಾಯಿಖಾನೆಗಳು ಇವೆ. ಕುಡಿಯುವ ನೀರಿಗಾಗಿ ಒಂದು ಬಾವಿ ಇದ್ದು ಮೋಟಾರು ಸಹಾಯದಿಂದ ನೀರನ್ನು ಟಾಂಕಿಯಲ್ಲಿ ತುಂಬಿಸಿ ನಳ್ಳಿಗಳ ಮೂಲಕ ವಿತರಿಸಲಾಗುವುದು.ಒಂದು ತಾತ್ಕಾಲಿಕ ಶೆಡ್ಡಿನಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ತಯಾರಿಸಿ ವಿತರಿಸಲಾಗುತ್ತಿದೆ.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
- ಸ್ಕೌಟ್ ಮತ್ತು ಗೈಡ್,
- ಆರೋಗ್ಯ ಸಂಘ,
- ಹುಡುಗಿಯರ ಸಮಾಲೋಚನಾ ಕೇಂದ್ರ,
- ಶುಚಿತ್ವ ಸೇನೆ,
- ಇಕೋ ಕ್ಲಬ್,
- ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ,
- ಶಾಲಾ ಪಾರ್ಲಿಮೆಂಟು,
- ಬಾಲ ಸಭೆ,
- ಯಕ್ಷಗಾನ ತರಬೇತಿ,
- ಇಂಗ್ಲೀಷ್ ಕ್ಲಬ್,
- ವಿಜ್ಞಾನ ಸಂಘ,
- ಗಣಿತ ಸಂಘ.
മാനേജ്മെന്റ് (ಆಡಳಿತ ವರ್ಗ)
ಈ ವಿದ್ಯಾಲಯವು ಏಕವ್ಯಕ್ತಿ ಮೆನೇಜ್ ಮೆಂಟ್ ಶಾಲೆಯಾಗಿದ್ದು ಪ್ರಸ್ತುತ ಶ್ರೀಮತಿ ವಿಜಯಶ್ರೀ ಬಿ ಅವರು ಶಾಲಾ ಮೆನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
ಶ್ರೀಯುತ ನೇರೋಳು ನಿಡುವಜೆ ರಾಮಚಂದ್ರ ಭಟ್ಟರು ಈ ಶಾಲೆಯ ಸ್ಥಾಪಕರಾಗಿದ್ದಾರೆ
സ്കൂളിന്റെ മുൻ പ്രധാനാദ്ധ്യാപകർ (ಹಿಂದಿನ ಮುಖ್ಯೋಪಾಧ್ಯಾಯರುಗಳು) :
- ಶ್ರೀಯುತ ನೇರೋಳು ನಿಡುವಜೆ ರಾಮಚಂದ್ರ ಭಟ್ಟ
- ಶ್ರೀಯುತ ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟ
- .ಶ್ರಿಯುತ ಎ. ನಾರಾಯಣ ಭಟ್ಟ
- ಶ್ರೀಯುತ ಕೆ.ಕೇಶವ ಭಟ್ಟ
- ಶ್ರೀಯುತ ಯನ್.ಯಚ್.ಲಕ್ಷ್ಮೀನಾರಾಯಣ ಭಟ್ಟ
പ്രശസ്തരായ പൂർവവിദ്യാർത്ഥികൾ (ಪ್ರಸಿದ್ಧರಾದ ಪೂರ್ವ ವಿದ್ಯಾರ್ಥಿಗಳು)
- ಶ್ರೀ ಯನ್.ಸುಬ್ಬಣ್ಣ ಭಟ್ಟ ( ಪುತ್ತಿಗೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷರು),
- ಶ್ರೀ ಕೋಳಾರು ಸತೀಶ್ಚಂದ್ರ ಭಂಡಾರಿ ( ಕ್ಯಾಂಪ್ಕೋ ದ ನಿರ್ದೇಶಕರು),
- ಶ್ರೀ ಯಸ್.ಕೃಷ್ಣ ನಾಯ್ಕ ( ಕಸ್ಟಂಸ್ ಅಧಿಕಾರಿ, ಗುಜರಾತ್),
- ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ. (ಖ್ಯಾತ ತೆಂಕು ತಿಟ್ಟು ಯಕ್ಷಗಾನ ಕಲಾವಿದ),
- ಶ್ರೀಮತಿ ಪಾರ್ವತಿ.ಜಿ.ಐತಾಳ್ (ಖ್ಯಾತ ಬರಹಗಾರ್ತಿ, ಲೇಖಕಿ, ಪ್ರೊಫೆಸರ್, ಭಂಡಾರ್ಕಾರ್ ಕಾಲೇಜು, ಕುಂದಾಪುರ),.
- ಶ್ರೀ ಕೆ.ಯಂ.ಗೋವಿಂದ ಭಟ್ (ಪೈವಳಿಕೆ ಪಂಚಾಯತು ಮಾಜಿ ಸದಸ್ಯರು)
How to reach
ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಂದ್ಯೋಡ್ ಜಂಕ್ಷನ್ ನಿಂದ 17 KM ಪೂರ್ವ ದಿಕ್ಕಿಗೆ, ಕುಂಬಳೆ - ಬದಿಯಡ್ಕ ದಾರಿಯಲ್ಲಿ ಸೀತಂಗೋಳಿ ಜಂಕ್ಷನ್ ನಿಂದ 14 KM ಉತ್ತರ ದಿಕ್ಕಿಗೆ ಎ.ಯು.ಪಿ.ಶಾಲೆ ಧರ್ಮತ್ತಡ್ಕ ಇದೆ. (ಕುಂಬಳೆ ರೈಲು ನಿಲ್ದಾಣದಿಂದ 25 KM , ಉಪ್ಪಳ ರೈಲು ನಿಲ್ದಾಣದಿಂದ 25 KM)