എസ് .ഡി. പി. എച്ച്. എസ്. ധർമ്മത്തടുക്ക/സോഷ്യൽ സയൻസ് ക്ലബ്ബ്

Schoolwiki സംരംഭത്തിൽ നിന്ന്

Teacher in Charge of Club
2022-23 വരെ2023-242024-25


ಸಮಾಜ ವಿಜ್ಞಾನ – Social Science Club Activities (2023-2024)

2022-23 ನೇ ಶೈಕ್ಷಣಿಕ ವರ್ಷದ ಸಮಾಜ ವಿಜ್ಞಾನ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು 17/06/2022 ದಂದು ಶಾಲಾ ಸಭಾಂಗಣ ನಡೆಯಿತು.ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯಗುರುಗಳಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನಿತಾ .ಕೆ ಸಮಾಜವಿಜ್ಞಾನ ಅಧ್ಯಾಪಕರಾದ ಶ್ರೀ ಶಿವಪ್ರಸಾದ್ ಸಿ ,ವಿಚೇತ ಬಿ ಜತೆಗಿದ್ದರು. ಲಾಸ್ಯ (10ಡಿ ) ಸ್ವಾಗತಿಸಿ ಪ್ರವೀಕ್ಷಾ (9 ಸಿ) ವಂದಿಸಿದನು. ಕು. ಡಾನಿಕ ಪಹಲ್ ಆರ್. ಕಾರ್ಯಕ್ರಮವನ್ನು ನಿರೂಪಿಸಿದಳು. ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಕಾರ್ಯದರ್ಶಿಯಾಗಿ ಪ್ರವೀಕ್ಷಾ(9 C) ಮತ್ತು ಜತೆ ಕಾರ್ಯದರ್ಶಿಯಾಗಿ ಕಿರಣ್ (8E) ಯನ್ನು ಆಯ್ಕೆ ಮಾಡಲಾಯಿತು.


ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಮೇಳ

Sl N0 Name of Participant Class Item Place Photo
1 ಮನೊಜ್ಞಾ ಚಿ ಎಚ್ 10 C ಭಾಷಣ ಪ್ರಥಮ
2 ಶನ್ವಿತ ಸಿ 10 B ವರ್ಕಿಂಗ್ ಮಾಡೆಲ್ ತೃತೀಯ
3 ಫಾತಿಮತ್ ಅಫ್ನ 9B ವರ್ಕಿಂಗ್ ಮಾಡೆಲ್ ತೃತೀಯ
4 ಲಿಖಿತ್ ಕೃಷ್ಣ ಎನ್ 10C ಸ್ಟಿಲ್ ಮಾಡೆಲ್ ತೃತೀಯ
5 ಸ್ತುತ 9E ಸ್ಟಿಲ್ ಮಾಡೆಲ್ ತೃತೀಯ
6 ನೂತನ್ ಎಡಕ್ಕಾನ 9C ಸ್ಥಳಿಯ ಇತಿಹಾಸ ಪ್ರಥಮ
7 ಯಜ್ಞಶ್ರೀ 9 D ಅಟ್ಲಾಸ್ ಮೇಕಿಂಗ್ C ಗ್ರೇಡ್‌
8 ತನುಶ್ ಕುಮಾರ್ ಯನ್ 10C ಟಾಲೆಂಟ್ ಸರ್ಚ್ ತೃತೀಯ

ಫ್ರೀಡಂ ಕ್ವಿಜ್ 2022

ಮಂಜೇಶ್ವರ ಉಪಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ಉಪಜಿಲ್ಲಾ ಮಟ್ಟದ ಫ್ರೀಡಂ ಕ್ವಿಜ್ 2022 ಇದರಲ್ಲಿ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಡಾನಿಕ ಪಹಲ್ ಆರ್.

ಜೂನ್ 05 -ವಿಶ್ವ ಪರಿಸರ ದಿನ

ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಪ್ರಕೃತಿಯಲ್ಲಿರುವ ವಿಶಿಷ್ಟ ವಾದ ಸಸ್ಯವನ್ನು ಮಕ್ಕಳಿಗೆ ಪಾರಿತೋಷಕವಾಗಿ ನೀಡುವುದು. “ Only One Earth ” ಎನ್ನುವ ವಿಷಯದ ಕುರಿತು ಪ್ರಬಂಧ ಮತ್ತು ಪೋಸ್ಟರ್ ರಚನೆಗೆ ಮಕ್ಕಳಿಗೆ ಸೂಚಿಸುವುದು.

ಜೂನ್ 21- ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಯೋಗ ಗುರುವಾಗಿರುವ ಪ್ರವೀಣ್ ಸೊಂಕಲ್ ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ - "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ"ಎಂಬ ಸಂದೇಶ ನೀಡಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು. ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.

ಜುಲೈ 11-ವಿಶ್ವ ಜನಸಂಖ್ಯೆ ದಿನ

ಜನಸಂಖ್ಯೆ ಯ ಹೆಚ್ಚಳದಿಂದ ದೇಶದ ಮೇಲೆ ಬೀರುವ ಪರಿಣಾಮದ ಕುರಿತು ಜಾಗೃತಿ ಮೂಡಿಸುವುದು. world of 8 billion: Towards a resilient future for all - Harnessing opportunities and ensuring rights and choices for all.” ಎನ್ನುವ ಸಂದೇಶ ಸಾರುವ ಒಂದು ಬೀದಿ ನಾಟಕ ಪ್ರದರ್ಶಿಸುವುದು. One Earth, One family, One Future ಕುರಿತು ಒಂದು ಚಿತ್ರ ರಚನೆ ಸ್ಪರ್ಧೆ ಏರ್ಪಡಿಸುವುದು. ಜುಲೈ 20 ಶಾಲಾ ಪಾರ್ಲಿಮೆಂಟ್ -2022-23 ಸಾಲಿನ ಶಾಲಾ ನಾಯಕನಾಗಿ ವಿದ್ಯಾರ್ಥಿನಿ ಹರ್ನಿತ ಮತ್ತು ವಿದ್ಯಾರ್ಥಿ ಲಿಖಿತ್ ಕೃಷ್ಣ ಎನ್ ಉಪನಾಯಕನಾಗಿ ಆಯ್ಕೆಯಾಗಿರುತ್ತಾರೆ.

ಜುಲೈ 07- ಶಾಲಾಮಟ್ಟದ ಶಾಸ್ತ್ರೋತ್ಸವ

ಜುಲೈ 07 ಶಾಲಾಮಟ್ಟದ ಶಾಸ್ತ್ರೋತ್ಸವ-ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ ಶಾಲಾಮಟ್ಟದ ಶಾಸ್ತ್ರ ಮೇಳವು ಇಂದು(30/07/2022) ನಡೆಯಿತು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಇವರು "ಪಠ್ಯಧಾರಿತ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು‌".ಶಾಲಾ ಮುಖ್ಯೋಪಾಧ್ಯಾಯರಾದ ಇ.ಎಚ್ ಗೋವಿಂದ ಭಟ್ ಇವರು ಸ್ಪರ್ಧೆಗಳಲ್ಲಿ‌ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಹಾರೈಸಿದರು.ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ಶಾಲಾ ನಾಯಕಿ ಹರ್ನಿತ ಅಭ್ಯಾಗತರನ್ನು ಸ್ವಾಗತಿಸಿ,ರಾಮ್ ಸ್ವರೂಪ್ ಆಳ್ವ ವಂದಿಸಿದನು.ಲಾಸ್ಯ ಕಾರ್ಯಕ್ರಮವನ್ನು‌ ನಿರೂಪಿಸಿದಳು. ಈ ಸಂದರ್ಭ ಸುಮಾರು 200 ಕ್ಕೂ‌ ಹೆಚ್ಚು ಮಕ್ಕಳು ವಿಜ್ಞಾನ,ಗಣಿತ,ಐಟಿ,ಸಮಾಜ ವಿಜ್ಞಾನ,ವರ್ಕ್ ಎಕ್ಸ್ ಪೀರಿಯೆನ್ಸ್ ವಿಭಾಗಗಳಲ್ಲಿ ಸಕ್ರಿಯವಾಗಿ ಭಾಗವಹಿದಸಿ ತಮ್ಮ ಕೌಶಲವನ್ನು‌ ಪ್ರದರ್ಶಿಸಿದರು.

ಅಗೋಸ್ತ್ 15 ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ

ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 76ನೆಯ ಸ್ವಾತಂತ್ರ್ಯ ಮಹೋತ್ಸವವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು. ಹೈಯರ್ ಸೆಕೆಂಡರಿ ಪ್ರಾಂಶುಪಾಲ "ಶ್ರೀ ಎನ್ ರಾಮಚಂದ್ರ ಭಟ್" ದ್ವಜಾರೋಹಣ ಗೈದರು. ಶಾಲಾ ಮಕ್ಕಳು ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಂಚರಿಸಿ ಸಂಭ್ರಮದ ಆಚರಣೆಯ ಮೆರುಗನ್ನು ಹೆಚ್ಚಿಸಿದರು.ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಎನ್ ಸುಬ್ರಾಯ ಭಟ್ "ಸಮರ ವೀರರ ಬಲಿದಾನದ ಫಲಿತಾಂಶವೇ ಇಂದಿನ ನಮ್ಮ ಸ್ವಾತಂತ್ಯ; ಇದನ್ನು ಅತಂತ್ರವಾಗಲು ಬಿಡಬಾರದು, ಸ್ವಾತಂತ್ರ್ಯ ಸಿಗುವುದರ ಹಿಂದಿನ ನಮ್ಮ ಹಿರಿಯರ ತ್ಯಾಗವನ್ನು ಇಂದಿನ ಮಕ್ಕಳು ಅರಿತು ಗೌರವಿಸಬೇಕು" ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಸೈನಿಕರಾದ "ಶ್ರೀ ಜಿ ಅಪ್ಪಯ್ಯ ಮಣಿಯಾಣಿ" ಇವರು - "ಭಾರತದ ವೀರ ಯೋಧರ ತ್ಯಾಗ ಬಲಿದಾನಗಳು, ಅವರ ಬದುಕಿನ ಮಾರ್ಗ ನಮಗೆ ಆದರ್ಶವಾಗಬೇಕು,ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯನ್ನು ಸೇರಿ ರಾಷ್ಟ್ರ ಸೇವೆಯನ್ನು ಗೈಯುವಲ್ಲಿ‌‌ ಮನ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಗಣ್ಯ ವ್ಯಕ್ತಿ ,ಕೃಷಿಕ " ಶ್ರೀ ಸುಧಾಕರ ಪಾರಿಂಜೆ" ಇವರು ಶುಭ ಹಾರೈಸಿದರು. ಈರ್ವರನ್ನೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕರಾದ ಶ್ರೀ ಎನ್ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು.ಅಭ್ಯಾಗತರ ಕಿರು ಪರಿಚಯವನ್ನು ಶ್ರೀಮತಿ ವಿಚೇತ ಬಿ ಹಾಗೂ ಶ್ರೀಮತಿ ಉಷಾಪದ್ಮ ವಾಚಿಸಿದರು.ಈ‌ ವೇಳೆಯಲ್ಲಿ, ಕೋವಿಡ್ ಸಂದಿಗ್ಧತೆಯ ಕಾಲದಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ,ಪ್ರಸ್ತುತವೂ ಹವ್ಯಾಸವಾಗಿ ಅದನ್ನು ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿ "ಅದ್ವಿತ್" ನನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.ಈತನ ಆಸಕ್ತಿ,ಪರಿಶ್ರಮದ ಕುರಿತಾದ ವರದಿ ದೃಶ್ಯ ಮಾದ್ಯಮಗಳಲ್ಲಿ ಈಗಾಗಲೇ ಬಿತ್ತರಗೊಂಡಿದ್ದವು. ಶ್ರೀಮತಿ ಶ್ವೇತಕುಮಾರಿ ಇವರು ಈತನ ಕುರಿತಾದ ವಿವರವನ್ನು‌ ವಾಚಿಸಿದರು. ಎಪ್ಪತ್ತೈದರ ಭಾರತದ ಸ್ವಾತಂತ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಕ್ಲಬ್, ಆರ್ಟ್ಸ್ ಕ್ಲಬ್ ವತಿಯಿಂದ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಅತಿಥಿಗಳ‌ ಮೂಲಕ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ನೃತ್ಯ, ಭಾಷಣ, ದೇಶಭಕ್ತಿಗೀತೆ ಮುಂತಾದವುಗಳ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಕಳೆಮೂಡಿಸಿದರು. ವಿದ್ಯಾರ್ಥಿಗಳಾದ ರಾಮ್ ಸ್ವರೂಪ್ ಆಳ್ವ ಹಾಗೂ ಪ್ರವೀಕ್ಷಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಶಿವನಾರಾಯಣ ಭಟ್,ಪ್ರಶಾಂತ ಹೊಳ್ಳ ಎನ್ ಹಾಗೂ ಶಶಿಧರ ಕೆ ನಿರೂಪಿಸಿದರು. ಶ್ರೀಮತಿ ಸುನೀತಾ ಕೆ ವಂದಿಸಿದರು.

ಅಗೋಸ್ತ್ 25 ಓಣಂ ಆಚರಣೆ-

ಕೇರಳದ ಸಾಂಸ್ಕೃತಿಕ ಹಬ್ಬ ಓಣಂನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ, ಪ್ರೌಢ ಶಾಲಾ ವಿಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಇದೇ ಸಂದರ್ಭ ಹೂವಿನ ರಂಗೋಲಿ(ಪೂಕಳಂ) ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯವಾಗಿ ಲಭಿಸಿದ ಹೂವುಗಳನ್ನು ಬಳಸಿ ವಿದ್ಯಾರ್ಥಿಗಳು ಹೂ-ರಂಗೋಲಿಯನ್ನು ರಚಿಸಿದರು. ಬಳಿಕ ಜರಗಿದ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಹಾಗೂ ಮೊಸರು ಕುಡಿಕೆ ಒಡೆಯುವುದು.. ಇತ್ಯಾದಿ ಸ್ಪರ್ಧೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಂಡದಲ್ಲೂ, ವೈಯಕ್ತಿಕ‌ ನೆಲೆಯಲ್ಲೂ ಬಹುಮಾನವನ್ನು ಪಡೆದರು.ಇದೇ ಸಂದರ್ಭ ಓಣಂ ಔತಣವನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಯಣ ಭಟ್, ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಬಹುಮಾನ ವಿತರಿಸಿದರು.ಸರ್ವ ಅಧ್ಯಾಪಕ, ಸಿಬ್ಬಂದಿ ವರ್ಗದವರ ಸಹಕಾರದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು.

ಸೆಪ್ಟಂಬರ್ 16 ವಿಶ್ವ ಓಝೋನ್ ದಿನ

ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ. ಓಝೋನ್ ನ ಸವಕಳಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಬಗ್ಗೆ ಮಕ್ಕಳಿಗೆ ಕೋಲೆಷ್ ತಯಾರಿಸಲು ಸೂಚಿಸುವುದು.

ಒಕ್ಟೋಬರ್ 02ಗಾಂಧೀಜಯಂತಿ ಆಚರಣೆ

ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆಯು ಮಹಾತ್ಮಾ ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯುವುದರ ಮೂಲಕ ಆಚರಿಸಲಾಯಿತು.ಮುಖ್ಯ ಶಿಕ್ಷಕ ಗೋವಿಂದ ಭಟ್ ನೇತೃತ್ವವನ್ನು ನೀಡಿದರು.ಆ ಬಳಿಕ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು‌.

ಮಾದಕವಸ್ತು ವಿರೋಧಿ ಜಾಗೃತಾ ಕಾರ್ಯಕ್ರಮ

ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ,ಹೆತ್ತವರಿಗಾಗಿ ಮಾದಕವಸ್ತು ವಿರೋಧಿ ತಿಳುವಳಿಕಾ ಶಿಬಿರವನ್ನು ನಡೆಸಲಾಯಿತು.ಬೆಳಗ್ಗೆ 10 ಗಂಟೆಗೆ,ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಮಾದಕವಸ್ತು ಜಾಗೃತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ನೇರ ದೃಶ್ಯಪ್ರಸಾರವನ್ನು ಪ್ರದರ್ಶಿಸಲಾಯಿತು.ಶಾಲಾ ಮಟ್ಟದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಹಾಜರಿದ್ದು ,ಹೆತ್ತವರು ಮಕ್ಕಳ ಮೇಲೆ ಇರಿಸಬೇಕಾದ ಕಾಳಜಿಯನ್ನು‌ ನೆನಪಿಸಿದರು.ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಮಾತನಾಡಿ "ಮಕ್ಕಳು ಮಾದಕವಸ್ತು ಗಳ ದಾಸರಾಗದಂತೆ ಹೆತ್ತವರು ಮಕ್ಕಳ ಚಲನವಲನಗಳನ್ನು ಸಮೀಪದಿಂದ ಗಮನಿಸುತ್ತಿರಬೇಕು" ಎಂದು ಎಚ್ಚರಿಸಿದರು. ಅಧ್ಯಾಪಕ "ರಕ್ಷಿತ್ ಕುಮಾರ್" ಇವರು ಮಾದಕ ವಸ್ತುಗಳ ಕುರಿತಾದ ತಿಳುವಳಿಕೆಯನ್ನು , ಹೆತ್ತವರು ಕೈಗೊಳ್ಳಬೇಕಾದ‌ ಮುನ್ನೆಚ್ಚರಿಕೆಯನ್ನು ವಿವರಿಸಿದರು.ಈ ಸಂದರ್ಭ ಸ್ಟಾಫ್ ಸೆಕ್ರೆಟರಿ "ರಾಮಕೃಷ್ಣ ಭಟ್" ,ಅಧ್ಯಾಪಿಕೆ "ಉಷಾ .ಕೆ.ಆರ್" ಹಾಗೂ ಆಧ್ಯಾಪಕ "ರಾಜಕುಮಾರ್" ಉಪಸ್ಥಿತರಿದ್ದರು.ಹೆತ್ತವರ ಪ್ರತಿನಿಧಿಯಾಗಿ "ಕೃಷ್ಣ ಭಟ್ ಹಾಗೂ ಚಂದ್ರಕಲಾ" ಇವರ ಗೌರವ ಉಪಸ್ಥಿತಿಯಿತ್ತು. "ಶಿವಪ್ರಸಾದ್ ಸಿ" ಕಾರ್ಯಕ್ರಮವನ್ನು ನಿರೂಪಿಸಿದರು. "ಶಶಿಧರ ಕೆ" ವಂದಿಸಿದರು.ಎಲ್ಲಾ ಅಧ್ಯಾಪಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ನವೆ‌ಂಬರ್ 11ಮಕ್ಕಳ ದಿನಾಚರಣೆ

ಕಲಿಕೆಯೊಂದಿಗೆ ನಲಿಕೆ ಎಂಬ ಆಶಯದೊಂದಿಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ.

ಸಮಾಜವಿಜ್ಞಾನ ಕ್ಲಬ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜವಹರ್ ಲಾಲ್ ನೆಹರು ರವರ ಪಾತ್ರ ದ ಕುರಿತು ಪ್ರಬಂಧ ರಚನೆ.

ಜನವರಿ 26 ಗಣರಾಜ್ಯೋತ್ಸವ ದಿನ

ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿದು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ಬೆಳೆಸುವುದು. ಮಕ್ಕಳು ಅವರ ಸ್ವಂತ ರಚನೆಯಲ್ಲಿ ದೇಶದ ಕುರಿತಾದ ಸೆಮಿನಾರ್ ರಚಿಸುವುದು. ದೇಶದ ಕುರಿತಾದ ಮಹತ್ತರ ವಾದ ಕಾರ್ಯಯೋಜನೆ ಮಕ್ಕಳ ಮನಸ್ಸಿನಲ್ಲಿದ್ದರೆ ಅದನ್ನು ಬರೆದು ತರಗತಿ ಮ್ಯಾಗಸಿನ್ ತಯಾರಿಸುವುದು.

ಪರೀಕ್ಷೆ - ನಿರೀಕ್ಷೆ _2022-23

ಅಧ್ಯಯನವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆಯು ಬದುಕಿನ ದಾರಿದೀಪ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು." ಎಂದು ನಿವೃತ್ತ ವಾಯು ಸೇನಾಧಿಕಾರಿ ಶ್ರೀ ಪ್ರಕಾಶ್ ಭಟ್ ಕುಕ್ಕಿಲ ನುಡಿದರು.

ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಶ್ರೀಯುತರು ಮಾರ್ಗದರ್ಶನವನ್ನು ನೀಡಿ ತರಗತಿಯನ್ನು ನಡೆಸಿ ಕೊಟ್ಟರು. ಜೊತೆಗೆ ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಅಧ್ಯಾಪಕ ಶ್ರೀ ಪ್ರಶಾಂತ ಹೊಳ್ಳ ಯನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಸೂರ್ಯನಾರಾಯಣ ಭಟ್ ವಂದಿಸಿದರು. ಶ್ರೀ ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀ ಶಿವಪ್ರಸಾದ್ ಸಿ ಹಾಗೂ ಶ್ರೀ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.