ജി.എച്ച്.എസ്. എസ്. മൊഗ്രാൽ പുത്തൂർ/അക്ഷരവൃക്ഷം/ರೈತ

Schoolwiki സംരംഭത്തിൽ നിന്ന്
ರೈತ

ಬೆಳ್ಳಂಬೆಳಗೆ ಏಳುವನು
ಹೊಲದ ಕಡೆಗೆ ಸಾಗುವನು
ನೊಗ ನೇಗಿಲು ಹಿಡಿಯುವನು
ಹೊಲದಲಿ ಮಣ್ಣನು ಉಳುವನು

ರೈತನೆ ನಮ್ಮ ಅನ್ನದಾತ
ಅವನೇ ನಮ್ಮ ಲೋಕದಾತ
ಲೋಕದ ಆಸ್ತಿಯೆ ಅವನಿಂದ
ಎಲ್ಲರ ಉಸಿರು ಅವನಿಂದ

ಹಚ್ಚ ಹಸುರಿನ ಪೈರನು ಬೆಳೆಸಿ
ಹಸಿವಿಂಗಿಸುವ ಶ್ರೇಷ್ಠನು ಅವನು
ಬೆಳ್ಳಂಬೆಳಗೆ ಏಳುವನು
ತಂಗಲು ಗಂಜಿ ಉಣ್ಣುವನು

ಭಾರತಮಾತೆಯ ಮಣ್ಣಿನ ಮಗನು
ಕಷ್ಟವೊ ನಷ್ಟವೊ ಬೆಳೆಸುವ ಬೆಳೆಯ
ತನ್ನಯ ಜೀವವ ಮುಡಿಪಾಗಿಡುತ
ಕಾಯಕ ನಿಷ್ಠೆಯ ಕಾಯುತಲಿರುವನು

ವಿನಯ ಬಿ.
X ജി.എച്ച്.എസ്. എസ്. മൊഗ്രാൽ പുത്തൂർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത