"എ എൽ പി എസ് കിളിംഗാർ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

11038 (സംവാദം | സംഭാവനകൾ)
'{{PSchoolFrame/Pages}}' താൾ സൃഷ്ടിച്ചിരിക്കുന്നു
 
(ചെ.) Schoolwikihelpdesk എന്ന ഉപയോക്താവ് എ എൽ പി എസ് കിളിംഗാർ ಎ.ಎಲ್.ಪಿ.ಎಸ್.ಕಿಳಿಂಗಾರು/ചരിത്രം എന്ന താൾ എ എൽ പി എസ് കിളിംഗാർ/ചരിത്രം എന്നാക്കി മാറ്റിയിരിക്കുന്നു
 
(മറ്റൊരു ഉപയോക്താവ് ചെയ്ത ഇടയ്ക്കുള്ള 5 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{PSchoolFrame/Pages}}
{{PSchoolFrame/Pages}}
[[പ്രമാണം:ALPS.JPG.jpg|ലഘുചിത്രം]]
'''ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938  ರಲ್ಲಿ ಸಾಮಾಜಿಕವಾಗಿ  ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು. ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್ , ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.'''
[[പ്രമാണം:FLAGHOST.jpg|ലഘുചിത്രം]]
'''1-4 ನೇ  ತರಗತಿ ಯವರೆಗೆ  ಕನ್ನಡ  ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾಧ್ಯಾಯಿನಿರಾದ  ಶ್ರೀವಿದ್ಯಾ . ಎ ,  ಮಧುಮತಿ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ, ಸಹನ ಯಂ ಮೊದಲಾದ ನುರಿತ  ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.
,
ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು  ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಇಂದು  ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ .
[[പ്രമാണം:EiTV4BD49198.jpg|നടുവിൽ|ലഘുചിത്രം]]
"https://schoolwiki.in/എ_എൽ_പി_എസ്_കിളിംഗാർ/ചരിത്രം" എന്ന താളിൽനിന്ന് ശേഖരിച്ചത്