ജി.എച്ച്.എസ്. എസ്. ബേകൂർ/അക്ഷരവൃക്ഷം/ Janasankya Spota

Schoolwiki സംരംഭത്തിൽ നിന്ന്
Janasankya Spota

ಪ್ರಬಂಧ.............. ಜನಸಂಖ್ಯಾ ಸ್ಫೋಟ ಭಾರತ ಎದುರಿಸುತ್ತಿರುವ ಸಮಸ್ಯೆಗಳು

 ಇಂದು ಭಾರತವು ಎದುರಿಸುತ್ತಿರುವ ಅತಿ ದೊಡ್ಡ  ಸಮಸ್ಯೆಯಾಗಿದೆ  ಜನಸಂಖ್ಯಾ ಹೆಚ್ಚಳ. ಆದುದರಿಂದ ಜುಲಾಯಿ ೨೧ ಜನಸಂಖ್ಯಾ ದಿನವನ್ನಾಗಿ ಆಚರಿಸುತ್ತಾರೆ. ಜನಸಂಖ್ಯಾ ಹೆಚ್ಚಳದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ.ಜನಸಂಖ್ಯಾ ಎಂದರೆ ಒಂದು ರಾಜ್ಯದ ಜನಸಂಖ್ಯೆಯನ್ನು ಅಳೆಯುವಾಗ ಸಿಗುವ ಸಂಖ್ಯೆಯೇ ಜನಸಂಖ್ಯೆ.. ಇದಕ್ಕೆ  ಕಾರಣ ಜನನ ಪ್ರಮಾಣ ಹೆಚ್ಚಾಗುವುದು ಹಾಗು ಮರಣ ಪ್ರಮಾಣ ಕಡಿಮೆಯಾಗುವುದು. ಬೇರೆ ದೇಶಗಳಿಂದ ಜನರು ವಲಸೆ ಬರುವುದು. ಆಗ ಆ ದೇಶದ ಜನಸಂಖ್ಯೆಯು ಹೆಚ್ಚಾಗುತ್ತದೆ . 
   ಜನಸಂಖ್ಯೆಯಾ ಹೆಚ್ಚಳವು ಒಂದು ರೀತಿಯಲ್ಲಿ ಲಾಭದಾಯಕವೂ ನಷ್ಟದಾಯಕವೂ ಆಗಿದೆ . ಜನಸಂಖ್ಯೆಯು ಹೆಚ್ಚಾದಾಗ ಕೆಲಸಮಾಡುವವರ ಸಂಖ್ಯೆಯು ಹೆಚ್ಚಾಗುತ್ತದೆ. ಇದರಿಂದ ದೇಶಕ್ಕೆ ಆದಾಯವು ಬರುತ್ತದೆ . ದೇಶದ ರಾಷ್ಟ್ರೀಯ ಆದಾಯವು ಹೆಚ್ಚಾಗುತ್ತದೆ. ದೇಶದ ರಾಷ್ಟ್ರೀಯ ಆದಾಯವು ಹೆಚ್ಚಾಗುತ್ತದೆ. ದೇಶವು ಅಭಿವೃದ್ಧಿ ಯಾಗುತ್ತದೆ. ನಮ್ಮ ದೇಶದ ಸ್ಥಳಾವಾಕಾಶವು ಕಡಿಮೆಯಾದುದರಿಂದ ಜನರ ಜಂಜಾಟ ಉಂಟಾಗುತ್ತದೆ . ಎಲ್ಲಿ ನೋಡಿದರು ಜನರು . ಜನರು ಹೆಚ್ಚಾದ ಹಾಗೆ ಉತ್ಪಾದನೆಯು ಹೆಚ್ಚಿಸಬೇಕಾಗುತ್ತದೆ. ಸರಕು ಮತ್ತು ಸೇವೆಗಳ ಪ್ರಮಾಣ ಹೆಚ್ಚಾಗುತ್ತದೆ. ಜನರ ಸಂಖ್ಯೆ ಹೆಚ್ಚಾದ ಹಾಗೆ ವಾಹನಗಳ ಪ್ರಮಾಣ ಹೆಚ್ಚ್ಚಾಗುತ್ತದೆ.      ವಾಹನಗಳ ಪ್ರಮಾಣ ಹೆಚ್ಚಾದ ಹಾಗೆ ಇಂಧನಗಳ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಭಾರತದಲ್ಲಿ ಇಂಧನಗಳ ಕೊರೆತೆ ಇರುವುದರಿಂದ ಬೇರೆ ದೇಶಗಳಿಂದ ಆಮದು ಮಾಡುತ್ತದೆ. ಆಗ ದೇಶವು ಆರ್ಥಿಕವಾಗಿ ಹಿಂದುಳಿಯುತ್ತದೆ. ಜನಸಂಖ್ಯೆ   ಹೆಚ್ಚಾದ ಹಾಗೆ ಮನೆ, ಕಟ್ಟಡ ,ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ.  ಜನರ ಸಂಖ್ಯೆಯು ಹೆಚ್ಚಾಗುವುದರಿಂದ ಶಾಲೆಗಳು ಕಾಲೇಜುಗಳು ಹೆಚ್ಚಾಗುತ್ತದೆ. ಆಗ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಜನರ ಸಂಖ್ಯೆ ಹೆಚ್ಚಾಗುವಾಗ ಜನರಿಗೆ ಬೇಕಾಗುವ ಉತ್ಪಾದನೆಗಳನ್ನು ಉತ್ಪಾದಿಸಲು ಸಾಧ್ಯವಾಗುದಿಲ್ಲ . ಆಗ ಬೇರೆ ದೇಶಗಳಿಂದ ವಸ್ತುಗಳನ್ನು ಆಮದು ಮಾಡುತ್ತೇವೆ .

ಜನಸಂಖ್ಯಾ ಸಮಸ್ಯೆಯಿಂದ ಭಾರತವು ಎದುರಿಸುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಮಾಲಿನ್ಯ. ಜನಸಂಖ್ಯೆ ಹೆಚ್ಚಾದಂತೆ ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತದೆ. ಹಾಗೂ ನೀರಿನ ಸಮಸ್ಯೆ . ಜನರು ನೀರಿಗೆ ಬೇಕಾಗಿ ಬೋರ್ ಬೆಲ್ ಗಳನ್ನೂ ಮಾಡುತ್ತಾರೆ, ಆದರೆ ನೀರಿನ ಅಂಶ ಕಡಿಮೆಯಾಗಿ ನೀರಿಲ್ಲದಂತಹ ಸ್ಥಿತಿ ಬರುತ್ತದೆ. ಅದೇ ರೀತಿ ಆಹಾರ. ಜನರು ಮನೆ ಕಟ್ಟಲು ಬಯಲು ಗದ್ದೆಗಳನ್ನು ಸಮತಟ್ಟಾಗಿ ಮಾಡಿ ಕೃಷಿ ನಾಶವಾಗಿ ಆಹಾರದ ಕೊರತೆಯ ಸಮಸ್ಯೆ ಬರುತ್ತದೆ.


Umamani
10 A ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം