G. L. P. S. Mulinja/OLD STUDENTS
FORMER FAMOUS OLD STUDENTS G. L. P. S. Mulinja
SUJATHA SHETTY :ಸುಜಾತ ಶೆಟ್ಟಿ ಮಾಜಿ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .
JAYAPRAKASH SHETTY: ಜಯ ಪ್ರಕಾಶ್ ಶೆಟ್ಟಿ ಉಪ್ಪಳದವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು. "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು. ದೂರದರ್ಶನ ( ಟಿ.ವಿ ) ಮಾದ್ಯಮದಲ್ಲಿ ರಾರಾಜಿಸಿದ ಇವರು ಈ ಟಿ.ವಿ ಸುವರ್ಣ ನ್ಯೂಸ್ ಪಬ್ಲಿಕ್ ಟ.ವಿ ಮೊದಲಾದ ಚಾನಲ್ ಗಳಲ್ಲಿ ನಿರೂಪಕರಾಗಿಯೂ ವರದಿಗಾರರಾಗಿಯೂ ಉತ್ತಮ ರೀತಿಯಲ್ಲಿ ಜನರ ಮನಸ್ಸನ್ನು ಹಿಡಿದಿಡಿವಲ್ಲಿ ನಿಸ್ಸೀಮರು ಹಿರಿಯ ರಾಜಕೀಯ ವ್ಯಕ್ತಿಗಳ, ಪ್ರಸಿದ್ಧ ಕಲಾಗಾರರ ಸಂದರ್ಶನ ನಡೆಸಿ ಕೊಟ್ಟ ಕೀರ್ತಿ ಅವರದು.ಮಾದ್ಯಮಗಳ ತನ್ನತನವನ್ನು ಕಾಪಾಡಿಕೊಂಡು ಸಮಾಜದ ಲೋಪದೋಷಗಳ ಬಗ್ಗೆ ಸ್ವರವೆತ್ತುವ ಜೊತೆಗೆ ಅದನ್ನು ಪರಿಹಸುವಲ್ಲಿ ಸರಕಾರದ ಗಮನವನ್ನು ಸೆಳೆದಿದ್ದಾರೆ. ಟಿವಿ ಚಾನೆಲ್ ಗಳು ಆಯೋಜಿಸುವ ಪ್ರತಿಯೊಂದು ಯೋಜನೆಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತರುವಲ್ಲಿ ಇವರ ಕಾಯಕ ಬಲು ಹಿರಿದು ಮತ್ತು ಪ್ರಾಮಾಣಿಕ.
Gangadhara Kondevoor : ಇವರು ಕಲಾವಿದರು, ಕರ್ನಾಟಕ ಸಂಗೀತ ವಯಲಿನ್ ನಲ್ಲಿ ಪರಿಣಿತರು. ಹರಿಕಥೆಯನ್ನು ಮಾಡಿ ಜನರ ಮನಸ್ಸನ್ನು ಗೆದ್ದವರು ಇವರು. 15 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. ಕವಿಯೂ ಕಲಾವಿದನೂ ಹೌದು ಎಂದು ಹೇಳಲು ಹೆಮ್ಮೆ ಇದೆ. ಲೇಖನ ,ಕವನ ಪ್ರಬಂಧ, ಸ್ಮರಣಸಂಚಿಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ಅವರ ಬರಹಗಳನ್ನು ಕಾಣಬಹುದು. .ವಿವಿಧ ಸಂಘಸಂಸ್ಠೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.ಇವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ, ಕೇರಳ.ವಿದ್ಯಾಭ್ಯಾಸ: ಬಿ.ಕಾಂ, ಎಲ್.ಎಲ್.ಬಿ, ಡಿ.ಪಿ.ಯಂ.ವೃತ್ತಿ: ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿ ಮತ್ತು ಭಾರತ ಸರಕಾರದ ನೋಟರಿಯಾಗಿ ಸೇವೆ.
- Manorama(Bank Employee)
- Indira(Doctor at America)
- PremSai(Senior Scientist .Bangalore)
- Sudha Holla(Gynecologist)
- Sandy Holla(Doctor)
- Sukumar(Social Worker)
- Bhaskara(Social Worker)
- Tukarama Acharya(carpenter, social Worker)
- Suresh Acharya
- Aneesh M(Artist of Theyyam)
- Anilraj(Artist of Drama and Movie)
- Gngadhara Kondevoor(Social Worker..Artist)