എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ ಶುಚಿತ್ವದ ಮಹತ್ವ
ಪರಿಸರ ಶುಚಿತ್ವದ ಮಹತ್ವ ಒಂದಾನೊಂದು ಕಾಲದಲ್ಲಿ ರಾಮು ತುಂಬಾ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ತುಂಬಾಸಲ ಆಸ್ಪತ್ರೆಗೆ ಹೋದರು ಪ್ರಯೋಜನವಾಗಲಿಲ್ಲ. ಔಷಧಿಯನ್ನು ಸೇವಿಸಿದರು ಅನಾರೋಗ್ಯವು ಕಡಿಮೆಯಾಗಲಿಲ್ಲ. ಇದ್ದಕಿದ್ದಂತೆ ಅರೋಗ್ಯ ಇಲಾಖೆಯ ವೈದ್ಯರು ರೋಗಿಯ ಮನೆಗೆ ಭೇಟಿನೀಡಿದರು. ಆತನ ಮನೆಯ ಸುತ್ತು ಮುತ್ತಲ ಪರಿಸರವು ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ತುಂಬಿರುವುದನ್ನು ಕಂಡು ರೋಗದ ಕಾರಣವನ್ನು ತಿಳಿಸಿದರು. ರಾಮು ವೈದ್ಯರಲ್ಲಿ ತನ್ನ ಅನಾರೋಗ್ಯವನ್ನು ಪರಿಹರಿಸಿ ಕೊಡಬೇಕಾಗಿ ವಿನಂತಿಸಿದನು. ಆಗ ವೈದ್ಯರು ನಿನ್ನ ಅನಾರೋಗ್ಯವನ್ನು ಪರಿಹರಿಸಲು ಬೇಕಾದ ಉಪಾಯವನ್ನು ಹೇಳುತ್ತೇನೆ. ನೀನು ಮನೆಯ ಸುತ್ತು ಮುತ್ತಲು ಪರಿಸರವನ್ನು ಶುಚಿಗೊಳಿಸಬೇಕು. ವೈದ್ಯರ ಸಲಹೆಯಂತೆ ಆತನು ಪರಿಸರವನ್ನು ಶುಚಿಗೊಳಿಸಿದನು. ಅಂದಿನಿಂದ ಅನಾರೋಗ್ಯವು ಕಡಿಮೆಯಾಗಿ ಆರೋಗ್ಯವಂತನಾದನು. ಬಳಿಕ ಅವನ ಮನಸ್ಸು ಪರಿವರ್ತನೆಯಾಗಿ ಪರಿಸರ ಶುಚಿತ್ವದ ಪ್ರಜ್ಞೆಯನ್ನು ಬೆಳೆಸಿಕೊಂಡನು.
ನೀತಿ :ಪರಿಸರ ಶುಚಿತ್ವ ನಮ್ಮ ಆರೋಗ್ಯದ ಭಾಗ್ಯವಾಗಿದೆ.
|