ಪ್ರಕೃತಿ ಮುನಿದರೆ.....

ಮಳೆಯ ರಭಸಕೆ

ಮುಳುಗಿ ಹೋಯಿತು

ದೇವನಾಡು ಕೇರಳ||

ಮುಗ್ಧ ಜನರದು

ಪ್ರಾಣ ತಿಂದಿತು

ಕ್ರೂರನಾಗಿಹ ವರುಣನು||

ಏನು ತಿಳಿಯದ

ಜನರ ಜೀವವ

ಕಸಿದುಕೊಂಡು ಹೋದೆಯಾ||

ಗೂಡು ಗುಡಿಸಲು

ಏನು ಇಲ್ಲದೆ

ಬದುಕುತಿಹರು ಈ ದಿನ ||

ತೋಡಿನಂತ ನೀರ

ಝರಿಯಲಿ

ಪ್ರಳಯವನ್ನೇ ಸೃಷ್ಟಿಸಿ||

ಸ್ವರ್ಗದಂತಹ

ನಾಡನಿಂದು

ನಾಶ ಮಾಡಿ ಬಿಟ್ಟೆಯ||

ಗಾಢ ನಿದ್ದೆಯಲಿ

ಇರುವ ಜನರನು

ದೋಚಿಕೊಂಡು ಹೋದೆಯಾ||

ಯಾವ ದ್ವೇಷವ

ಇಲ್ಲಿ ತೋರಿದೆ

ಕುರುಣಿ ಇಲ್ಲವೆ ನಿನಗಿದು||

ಕಳೆದು ಹೋದವರ

ಹುಡುಕುತಲಿಹರು

ನಮ್ಮ ಹೆಮ್ಮೆಯ ಸೈನ್ಯವು||

ಕೇಸರ ಅಡಿಯಲಿ

ಜನರ ರಾಶಿಯ

ತೆಗೆದರೆಲ್ಲವೂ ಹೆಣಗಳು ||

ಇಂದಿನ ಮಕ್ಕಳೇ

ಕೇಳಿ ತಿಳಿಯಿರಿ

ಪ್ರಕೃತಿ ನಮ್ಮ" ಗೆಳೆಯರು"||

ಸ್ನೇಹ ಪ್ರೀತಿ ತೋರದಿದ್ದರೆ

ಮುಂದೆ ಒಂದು ದಿನ

ಇದೇ ಗತಿ||


ಗಾನವಿ
9C എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത