ಓದಿನ ಟಿಪ್ಪಣಿ ಸ್ಪರ್ಧೆ

ಓದಿನ ಟಿಪ್ಪಣಿ ಸ್ಪರ್ಧೆ ನಡೆಸುವುದರಿಂದ ಮಗುವಿನಲ್ಲಿ ಓದುವಿಕೆಯಲ್ಲಿ ಆಸಕ್ತಿ ಮೂಡುವುದರೊಂದಿಗೆ ಜ್ಞಾನಾರ್ಜನೆಯೂ ಉಂಟಾಗುತ್ತದೆ ಅಲ್ಲದೆ ಓದಿನ ಟಿಪ್ಪಣಿ ರಚಿಸುವ ಕೌಶಲ್ಯವೂ ಬೆಳೆಯುತ್ತದೆ.

ಓದಿನ ಟಿಪ್ಪಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು. ಪ್ರಥಮ: ನೂತನ್ ಎಡಕ್ಕಾನ 10ಸಿ ಅತ್ಯುತ್ತಮ 5 ಬಹುಮಾನ ವಿಜೇತರು 1 ಕಡೀಜ ಸಫ  9ಸಿ 2 ಮನೀಶ್ ಕೃಷ್ಣ 9ಡಿ 3 ಫಾತಿಮತ್ ಕೌಸರ 9ಎ 4 ಅಫ್ಲಾಹ AA 8ಸಿ 6 ವೀಕ್ಷಿತ್ 9ಸಿ ಇವರಿಗೆ ಪ್ರಸನ್ನ ವಿ ಚೆಕ್ಕೆಮನೆ ಅವರು ಬರೆದ "ಹೂ ಮಳೆಗೆ ಮಿನುಗುವ ಮೇಘಗಳು" ಕಥಾ ಸಂಕಲನ ಪುಸ್ತಕವನ್ನು ಬಹುಮಾನವಾಗಿ ಕೊಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ 100 ಪುಟದ ಪುಸ್ತಕವನ್ನು ನೀಡಲಾಯಿತು.

ರಸ ಪ್ರಶ್ನೆ

28/06/2024ರಂದು ಕನ್ನಡ,ಹಿಂದಿ ಮತ್ತು ಆಂಗ್ಲಭಾಷೆಯ ಸಾಹಿತ್ಯಆಧಾರಿಸಿ ರಸಪ್ರಶ್ನೆಯನ್ನು ಆಯಾಯ ಭಾಷೆಯಲ್ಲಿ ಏರ್ಪಡಿಸಲಾಯಿತು.ಮಕ್ಕಳಲ್ಲಿ ಓದುವಿಕೆಯ ಹವ್ಯಾಸ ಮೂಡಿಸುವುದು ಮತ್ತು ಸ್ಮರಣಶಕ್ತಿ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.


ಆಸ್ವಾದನ ಟಿಪ್ಪಣಿ ಸ್ಪರ್ಧೆ

ದಿನಾಂಕ 27/06/2024ರಂದು   ಕನ್ನಡ ಕವನ ಆಸ್ವಾದನ ಟಿಪ್ಪಣಿ ಸ್ಪರ್ಧೆಯನ್ನು  ಕವಿಗಳು, ಕವನಗಳ ಪರಿಚಯ ಮೂಡಿಸುವ ಉದ್ದೇಶದಿಂದ ಮತ್ತು ಆಸ್ವಾದನಾ ಟಿಪ್ಪಣಿ ರಚಿಸುವ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಯಿತು..

ಆಸ್ವಾದನ ಟಿಪ್ಪಣಿ ಸ್ಪರ್ಧೆ

2024-25ನೇ ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆಯು ಜೂನ್21ನೇ ತಾರೀಕಿನಂದು  ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ಶಾಲಾ ಪ್ರಬಂಧಕರಾದ ಶ್ರೀ ಶಂಕರ ನಾರಾಯಣ ಭಟ್ ಸರ್ ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಸರ್ ಅಧ್ಯಕ್ಷತೆವಹಿಸಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಕುಮಾರಿ ಶ್ರೀಪ್ರಿಯಾ 9 ಡಿ ಮತ್ತು ಜತೆ ಕಾರ್ಯದರ್ಶಿಯಾಗಿ ಭವಿಷ್ ಶೆಟ್ಟಿ 8ಡಿ ಆಯ್ಕೆಯಾದರು.