ഉള്ളടക്കത്തിലേക്ക് പോവുക

Schoolwiki:എഴുത്തുകളരി/kavyapail

Schoolwiki സംരംഭത്തിൽ നിന്ന്

ಬಂಡೆ. ಆತ್ಮ ಕಥೆ ನಾನುಬಂಡೆ.ಕಾಡಿನಲ್ಲೋ, ಪರ್ವತ ದಲ್ಲೋ ನಾನು ಹುಟ್ಟಿದೆ.ನನ್ನ ಮೈಯಲ್ಲಿ ಅನೇಕ ಗಿಡ ಮರಗಳಿಗೆ ಜನ್ಮ ನೀಡಿದೆ. ಹಾವಸೆಗೆ ಆಸರೆಯಾದೆ.ಮುಂದೊಂದು ದಿನ ನನ್ನಲ್ಲಿಗೆ ಶಿಲ್ಪಿ ಬಂದ. ನನ್ನನ್ನು ಎತ್ತಿ ತೆಗೆದುಕೊಂಡು ಹೋದ.ದೊಡ್ಡ ನೀರಿನ ಕೊಳದಲ್ಲಿ ಹಾಕಿದ. ಹಲವಾರು ಸಮಯ ನಾನು ನೀರಿನಲ್ಲೇ ಉಳಿದು ಕೊಂಡೆ.ಚಿಪ್ಪುಗಳು,ಸಣ್ಣ ಮೀನುಗಳು ನನ್ನ ಎಡೆಯಲ್ಲಿಆಸರೆಪಡೆದುಕೊಂಡಿತು.ಹೀಗಿರುವಾಗ ಒಂದು ದಿನ ಶಿಲ್ಪಿಯೊಬ್ಬನ ಕೈಗೆ ಸಿಕ್ಕಿಕೊಂಡೆ.ಆತ ನನ್ನನ್ನು ಕೆತ್ತಿ ಕೆತ್ತಿ ಸುಂದರವಾದ ಒಂದು ಮೂರ್ತಿಯನ್ನು ಮಾಡಿದ. ನಂತರ ನನ್ನ ಪಯಣ ದೇವರ ಗುಡಿಯತ್ತ ಸಾಗಿತು.ನನ್ನನ್ನು ಪ್ರತಿಷ್ಠೆ ಮಾಡಿದರು.ಪೂಜೆ,ಅಲಂಕಾರ,ನೈವೇದ್ಯ ಸಮರ್ಪಣೆಯಾಯಿತು.ಭಕ್ತರು ಕೈ ಮುಗಿಯ ತೊಡಗಿದರು.ಬಂಡೆಯಾಗಿ ಹುಟ್ಟಿ ಪ್ರತಿಮೆಯಾಗಿ ಬೆಳೆದು ಜನ ಮನದಲ್ಲಿ ಮರೆಯತೊಡಗಿದೆನು.

ಕಾವ್ಯ. ಪಿ.ಐಲ್.                ಜಿ.ಎಚ್.ಎಸ್.ಎಸ್ ಬೇಕೂರು
"https://schoolwiki.in/index.php?title=Schoolwiki:എഴുത്തുകളരി/kavyapail&oldid=2682206" എന്ന താളിൽനിന്ന് ശേഖരിച്ചത്