Savina Bhaya

  

ಸಾವಿನ ಭಯ
ಭೂಮಿಗೆ ಬಂದಿತು ವೈರಸ್ ಕೊರೊನಾ
ತಂದಿತು ಜನರಿರದ ಪಟ್ಟಣ
ಜನಜಂಗುಳಿಂದ ದೂರವಿರೋಣ
ತಪ್ಪದೆ ಮಾಸ್ಕ್ ನ್ನು ಧರಿಸೋಣ
ಕನಸಿನ ಕಟ್ಟಡ ಆಯಿತು ನೆಲಸಮ
ರಜೆಯ ಮಾಡದೆ ಪಟ್ಟರು ಪರಿಶ್ರಮ
ವೈದ್ಯ ಸಿಬ್ಬಂದಿಯ ನಿರಂತರ ಶ್ರಮ
ವೈದ್ಯರೇ ಆದರು ದೇವರ ಸಮಸಮ
ಇಟಲಿ ಫ್ರಾನ್ಸ್ ಜರ್ಮನಿ ಚೀನಾ
ಭಾರತ ಅಮೇರಿಕಾ ಇಂಗ್ಲೆಂಡ್ ಇರಾನ್
ವೇಗದ ಜೀವನಕ್ಕೆ ಬ್ರೇಕರ್ ಇದೇನಾ
ಇದುವೇ ಪ್ರಪಂಚಕ್ಕೆ ವಿನಾಶದ ಸೂಚನೆನಾ
ಮನೆಯಲ್ಲೂ ಅಂತರ ಕಾಪಾಡೋಣ
ಶುಚಿಯಾಗಿರಲು ಮರೆಯದಿರೋಣ
ಭಾರತಾಂಬೆಯ ಮಕ್ಕಳಾದ ನಾವು
ಸಂಯಮದಿಂದ ಇರೋಣ ನಾವು ನೀವು
ಶೀತಜ್ವರ ಕೆಮ್ಮು ಬಂದರೆ
ವೈದ್ಯರ ಕಂಡು ತಪ್ಪಿಸುವ ತೊಂದರೆ
ಸರಕಾರಕ್ಕೆ ನಾವು ಸಹಕರಿಸೋಣ
ಹೊಡೆದೊಡಿಸಬೇಕಾಗಿದೆ ಈ ಕೆಟ್ಟ ಕೊರೊನಾ

ರಾಜಾರಾಮ,
೬ ಎ

RAJARAMA
6 A ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത