ബി പി പി എ എൽ പി എസ് പെർമുഡെ(ಬಿ.ಪಿ.ಪಿ.ಎ.ಎಲ್.ಪಿ.ಎಸ್ ಪೆರ್ಮುದೆ )

Schoolwiki സംരംഭത്തിൽ നിന്ന്
(11232 എന്ന താളിൽ നിന്നും തിരിച്ചുവിട്ടതു പ്രകാരം)
അച്ചടി പതിപ്പ് നിലവിൽ പിന്തുണയ്ക്കുന്നില്ല, അതിൽ റെൻഡറിങ് പിഴവുകൾ ഉണ്ടാവാനിടയുണ്ട്. ദയവായി താങ്കളുടെ ബ്രൗസർ ബുക്ക്മാർക്കുകൾ പുതുക്കുക, ബ്രൗസറിൽ സ്വതേയുള്ള അച്ചടി സൗകര്യം ഉപയോഗിക്കുക.
TrophyIcon.jpg 2021-22 ലെ സ്കൂൾവിക്കി പുരസ്കാരം നേടുന്നതിനായി മൽസരിച്ച വിദ്യാലയം.
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ


ബി പി പി എ എൽ പി എസ് പെർമുഡെ(ಬಿ.ಪಿ.ಪಿ.ಎ.ಎಲ್.ಪಿ.ಎಸ್ ಪೆರ್ಮುದೆ )
11232 BPPALPS PERMUDE.jpg
വിലാസം
PERMUDE

PERMUDE പി.ഒ.
,
671324
സ്ഥാപിതം1895
വിവരങ്ങൾ
ഇമെയിൽbppalpspermude@gmail.com
വെബ്‍സൈറ്റ്
കോഡുകൾ
സ്കൂൾ കോഡ്11232 (സമേതം)
യുഡൈസ് കോഡ്32010100417
വിക്കിഡാറ്റQ64398373
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്കാസർഗോഡ് KASARAGOD
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംപൈവളികെ PAIVALIKE പഞ്ചായത്ത് (Panchayath)
വാർഡ്12
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ63
പെൺകുട്ടികൾ41
ആകെ വിദ്യാർത്ഥികൾ104
അദ്ധ്യാപകർ5
സ്കൂൾ നേതൃത്വം
പ്രധാന അദ്ധ്യാപകൻSADASHIVA.K.K
പി.ടി.എ. പ്രസിഡണ്ട്MOHAMMADALI.P.M
എം.പി.ടി.എ. പ്രസിഡണ്ട്CHETHANA
അവസാനം തിരുത്തിയത്
04-03-202411232


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് Badoor Permude Parameshwari A.L.P.School Permude . 1895 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ PERMUDE എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


SCHOOL HISTORY

ಬಾಡೂರು ಪೆರ್ಮುದೆ ಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲೆ 1895ನೇ ಇಸವಿಯಲ್ಲಿ ಮದರಾಸು ಸರಕಾರದಿಂದ ಮಾನ್ಯತೆ ಪಡೆದ ನಮ್ಮ ಶಾಲೆಯು ಬಾಡೂರು ಪ್ರಾಥಮಿಕ ಶಾಲೆ ಎ೦ಬ ಹೆಸರಿನಲ್ಲಿ ಬಾಡೂರು ಗ್ರಾಮದ ಕಟ್ಟದಕಾಡು ಎ೦ಬಲ್ಲಿ ಸ್ಥಾಪನೆಗೊಂಡಿತು. ಕಳೆದ 128 ವರ್ಷಗಳಿಂದ ಈ ಪ್ರದೇಶದ ವಿದ್ಯಾಭ್ಯಾಸ ಹಾಗು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಾ ತನ್ನ 129ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ಶಾಲೆಯು ಪ್ರಕ್ರತಿ ರಮಣೀಯವಾದ ಪೆರ್ಮುದೆಗೆ ವರ್ಗಾಯಿಸಲ್ಪಟ್ಟಿತು. ಪ್ರಾಥಮಿಕ ಹಂತದಲ್ಲಿ ಮೊದಲು ಇಲ್ಲಿ 1 ರಿಂದ 5 ರ ತರಗತಿಗಳಿಗೆ ಸರಕಾರದಿಂದ ಮಾನ್ಯತೆ ಲಭಿಸಿದ್ದರೂ ಪ್ರಸ್ತುತ 1 ರಿಂದ 4ರ ವರೆಗೆ ತರಗತಿಗಳು ನಡೆಯುತ್ತಿದೆ. ಮೊದಲು ಶನ್ನಿಕೋಡಿ ಮನೆತನದವರು ಈ ಶಾಲೆಯ ಪ್ರಭಂಧಕರಾಗಿದ್ದರು. ಪ್ರಸ್ತುತ ಎಡಕ್ಕಾನ ರವಿಶಂಕರ ಭಟ್ ರವರ ಪ್ರಬಂಧಕತ್ವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಅತ್ಯುತ್ತಮ ಎಲ್.ಪಿ ಶಾಲೆಗಳಲ್ಲಿ ಒಂದಾಗಿ ದಿಟ್ಟ ಹೆಜ್ಜೆಯಿಡುತ್ತಿದೆ. ನಮ್ಮ ಶಾಲೆಗೆ ಸಮೀಪದ ಎಡಕ್ಕಾನ, ಪೆರಿಯಡ್ಕ, ಕುಂಡೇರಿ, ನೆಕ್ಕರೆಕಾಡು, ಕಂಬಾರು, ಶನ್ನಿಕೋಡಿ, ಬೊಟ್ಟ, ತಲೆಮೊಗೇರು, ಮಂಜುಕೋಡಿ ಮೊದಲಾದ ಸ್ಥಳಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಪಿ.ಟಿ.ಎ, ಯಂ.ಪಿ.ಟಿ.ಎ, ಹಾಗೂ ಸಂಘ ಸಂಸ್ಥೆಗಳು ನೀಡುತ್ತಿರುವ ಸಹಕಾರಗಳು ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಅತ್ಯುತ್ತಮ ಸಮವಸ್ತ್ರ, ಕಾರ್ಯಕ್ಷಮವಾದ ಮಧ್ಯಾಹ್ನದ ಭೋಜನ ವ್ಯವಸ್ಥೆ, ಗುಣಮಟ್ಟದ ವಿದ್ಯಾಭ್ಯಾಸ, ಶೈಕ್ಷಣಿಕ ವರ್ಷಗಳಲ್ಲಿ ನಡೆಯುವ ವಿವಿಧ ಮೇಳಗಳಲ್ಲಿ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ, ಉಪ ಜಿಲ್ಲೆ, ಜಿಲ್ಲಾ ಮಟ್ಟದ ಶಾಲಾ ಕಲೋತ್ಸವಗಳಲ್ಲಿ ಉತ್ತಮ ಸಾಧನೆ,ಶಾಲಾ ವಾರ್ಷಿಕೋತ್ಸವ, ತರಬೇತಿ ಶಿಬಿರಗಳು, ಆರೋಗ್ಯ ತರಗತಿಗಳು,ಎ೦ಬಿವುಗಳು ಶಾಲೆಯ ಶೈಕ್ಷಣಿಕ ಅಭಿವೃಧಿಯ ಸಂಕೇತಗಳಾಗಿವೆ.

INFRASTRUCTURE

1.5 acre ಭೂಭಾಗವು ಶಾಲೆಗಿದೆ. K.E.R ಅಳತೆಯ 4 ತರಗತಿ ಕೋಣೆಗಳು ಮತ್ತು 1 ಆಫೀಸು ಕೋಣೆಯನ್ನೊಳಗೊಂಡ ಕಟ್ಟಡದಲ್ಲಿ ಶಾಲೆಯು ಕಾರ್ಯವೆಸಗುತ್ತಿದೆ.ಕುಡಿನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ , ಟೇಪ್ ನೀರಿನ ವ್ಯವಸ್ಥೆಯಿದೆ.ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಈಗ ನಿರ್ಮಿಸಲಾಗಿದೆ.5 ಶೌಚಾಲಯಗಳು, 8 ಮೂತ್ರದೊಡ್ಡಿಗಳು ಶಾಲೆಯಲ್ಲಿವೆ. ವಿದ್ಯುತ್ ಸೌಕರ್ಯವನ್ನು ಶಾಲೆಯು ಹೊಂದಿದೆ.ಉತ್ತಮ ಮೈದಾನ ಮತ್ತು ಆವರಣ ಗೋಡೆ ಇದೆ.

CO-CURRICULAR ACTIVITIES

ವಾರದ ರಜಾ ದಿನಗಳಲ್ಲಿ ಸಂಗೀತ, ನಾಟಕ ತರಬೇತಿ ತರಗತಿಗಳು ನಡೆಯುತ್ತಿದೆ. ವಿಜ್ಙಾನ, ಆರೋಗ್ಯ,ಗಣಿತ, ಎಂಬೀ ಕ್ಲಬ್ ಗಳು ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ವೃತ್ತಿಪರಿಚಯ ಮತ್ತು ಗಣಿತ ಮೇಳಗಳಲ್ಲಿ ಮಕ್ಕಳು ಬಹುಮಾನಗಳನ್ನು ಪಡೆದಿದ್ದಾರೆ.ಕಲೋತ್ಸವದಲ್ಲಿಯೂ ಶಾಲಾ ಮಕ್ಕಳು ಸಮಗ್ರ ಪ್ರಶಸ್ತಿಗಳಿಸಿದ್ದಾರೆ.

MANAGEMENT

ವೈಯಕ್ತಿಕ ಆಡಳಿತ ಇ. ರವಿಶಂಕರ ಭಟ್ ವ್ಯವಸ್ಥಾಪಕರು (Manager)

FORMER HEADMASTERS

SL NO YEAR NAME OF THE HM
1 ಯಸ್ .ರಾಮಕೃಷ್ಣ ಭಟ್
2 ಗೋಪಾಲಕೃಷ್ಣ ಭಟ್
3 ರಾಮಕೃಷ್ಣ ಭಟ್
4 ಇ. ಕೇಶವ ಭಟ್
5 ಮಹಾಬಲ ಭಟ್
6 2008 to 2013 ಶಂಕರನಾರಾಯಣ ಭಟ್
7 2013 to 2104 ಲಲಿತ.ಎ
8 2014 TO 2020 ಶಾರದ.ಎ
9 2020 to ಸದಾಶಿವ.ಕೆ.ಕೆ

FAMOUS OLD STUDENTS

  • ಕೋಳಾರು ಕುಂಞಣ್ಣ ಭಂಡಾರಿ ( ರಾಮಕೃಷ್ಣ ಆಸ್ಪತ್ರೆ ಮೆಡಿಕಲ್ ಬೆಂಗಳೂರು)
  • ಕೋಳಾರು ಸತೀಶ್ಚಂದ್ರ ಭಂಡಾರಿ ( ಕ್ಯಾಂಪ್ಕೋ ಡೈರಕ್ಟರ್)
  • ಹರಿಹರ ಭಟ್ ಪೂಕಳ ( ಸಿಂಡಿಕೇಟ್ ಬೇಂಕ್ , ನಿವೃತ್ತ ವ್ಯವಸ್ಥಾಪಕರು)
  • ಕೆ.ಕೃಷ್ಣ ಭಟ್ ( ಎಜು ಕೇರ್ IT Company )
  • Dr. ಇ. ಪ್ರದೀಪ್ . B.A.M.S , M.D

PHOTO GALLERY

11232 BPPALPS PERMUDE.jpg
11232 Republic day.jpg



ಬಿ.ಪಿ.ಪಿ.ಎ.ಎಲ್.ಪಿ. ಪೆರ್ಮುದೆ ಶಾಲೆಯಲ್ಲಿ ಗಣರಾಜ್ಯೋತ್ಸವ  ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಮಾಸ್ಟರ್ ಧ್ವಜಾರೋಹಣ ಗೈದರು. ಶಾಲಾ  ಅಧ್ಯಾಪಕ ವೃಂದ

ಉಪಸ್ಥಿತರಿದ್ದರು.

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ  ಪ್ರವೇಶೋತ್ಸವ

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ  ಪ್ರವೇಶೋತ್ಸವ

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ ಪ್ರವೇಶೋತ್ಸವವು ಮೆರವಣಿಗೆ ಹಾಗೂ ವಿವಿಧ ಮನರಂಜನ ಕಾರ್ಯಕ್ರಮಗಳೊಂದಿಗೆ  ಬಹಳ ವಿಜೃಂಭಣೆಯಿಂದ ಜರಗಿತು.   ಕಾರ್ಯಕ್ರಮದ ಮೊದಲಿಗೆ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಪ್ರದರ್ಶಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ. ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡು ಸದಸ್ಯೆ ಶ್ರೀಮತಿ ಇರ್ಶಾನ ಇಸ್ಮಾಯಿಲ್ ಕಾರ್ಯಕ್ರಮವನ್ನು  ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು.ಮಾಜಿ ಪಂಚಾಯತ್ ಸದಸ್ಯರು ಶ್ರೀ ಎಂ.ಕೆ ಅಮೀರ್, ಶ್ರೀ ಸತೀಶ್ಚಂದ್ರ ಭಂಡಾರಿ ಕೋಳಾರು ,ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಲಲಿತ ಹಾಗೂ ಶ್ರೀಮತಿ ಶಾರದಾ, ಪಿ.ಟಿ.ಎ ಅಧ್ಯಕ್ಷರಾದ ಶ್ರೀ ವಿಠಲ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಈಶ್ವರ ನಾಯ್ಕ, ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಚೇತನ ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ್ ಭಟ್ ಎಡಕ್ಕಾನ ಇವರು ನವಾಗತ ಮಕ್ಕಳಿಗೆ ಕಲಿಕೋಪಕರಣಗಳ ಕಿಟ್ ನೀಡಿ ಆದರದಿಂದ ಸ್ವಾಗತಿಸಿ ಶುಭ ಹಾರೈಸಿದರು. ಬಳಿಕ ಮಕ್ಕಳಿಂದ ವಿವಿಧ ಮನೋರಂಜನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ  ಸ್ವಾಗತಿಸಿ, ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್  ಕಾರ್ಯಕ್ರಮವನ್ನು ನಿರೂಪಿಸಿದರು.

ಪರಿಸರ ದಿನಾಚರಣೆ .png

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ  ವಿಶ್ವ ಪರಿಸರ ದಿನಾಚರಣೆ

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ  ವಿಶ್ವ ಪರಿಸರ ದಿನಾಚರಣೆ ಪರಿಸರ ಸಂಘದ ನೇತೃತ್ವದಲ್ಲಿ ಜರಗಿತು.ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರೊಂ ದಿಗೆ  ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾ ಯರಾದ  ಶ್ರೀ ಸದಾಶಿವ.ಕೆ.ಕೆ ಪರಿಸರ ದಿನಾಚರಣೆಯ ಮಹತ್ವದ ಕುರಿತು ತಿಳಿಸಿದರು. ಶ್ರೀ ಸದಾಶಿವ ಬಾಲಮಿತ್ರ ರಚಿಸಿ ನಿರ್ದೇಶಿಸಿ ನಟಿಸಿದ ಎಕೋ ಕಿರು ಚಲನಚಿತ್ರವನ್ನು ಪ್ರದರ್ಶಿಸಲಾಯಿತು.ವಿದ್ಯಾರ್ಥಿಗಳಿಗೆ ಚಿತ್ರ ರಚನೆ, ಪೋಸ್ಟರ್ ತಯಾರಿ, ರಸಪ್ರಶ್ನೆ, ಎಂಬಿತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು.ಅಧ್ಯಾಪಕ ವೃಂದ ವಿದ್ಯಾರ್ಥಿಗಳು ಸೇರಿ ಶಾಲಾ ವಠಾರವನ್ನು ಶುಚಿಗೊಳಿಸಿದರು. ಪರಿಸರ ಸಂಘದ ಸಂಚಾಲಕರಾದ ಜಯಪ್ರಸಾದ್ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದರು.ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.


ROUTE MAP TO SCHOOL

  1. Kasaragod to Bandyod to Permude
  2. Kasaragod to Seethangoli to Angadimoger to Permude

Loading map...