എസ് എൻ എ എൽ പി എസ് പെർള ಎಸ್.ಎನ್.ಎ.ಎಲ್.ಪಿ.ಎಸ್.ಪೆರ್ಲ

Schoolwiki സംരംഭത്തിൽ നിന്ന്
17:02, 2 ജനുവരി 2022-നു ഉണ്ടായിരുന്ന രൂപം സൃഷ്ടിച്ചത്:- Praveenseethangoli (സംവാദം | സംഭാവനകൾ)
എസ് എൻ എ എൽ പി എസ് പെർള ಎಸ್.ಎನ್.ಎ.ಎಲ್.ಪಿ.ಎಸ್.ಪೆರ್ಲ
സ്കൂൾ ചിത്രം
Established 1925
School Code 11321
Place Kumbala
Address PERLA POST
PIN Code 671552
School Phone 04998226377
School Email perlasnalps@gmail.com
Web Site 11321snalps.blogspot.com
District Kasargod
Educational District Kasargod
Sub District Manjeshwaram

Catogery AIDED
Type General
Sections LPS

Medium Kannada
No of Boys 114
No of Girls 122
Total Students 236
No of Teachers 1+7
Principal
Head Master MAHALINGESHWARA N
P.T.A. President DR. K KESHAVA NAIK
പ്രോജക്ടുകൾ
E-Vidhyarangam Help
02/ 01/ 2022 ന് Praveenseethangoli
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಸ್ವಾತಂತ್ರ್ಯ ಪೂರ್ವದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ , ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾದ ಕಾಸರಗೋಡು ತಾಲೂಕು ಎಣ್ಮಕಜೆ ಗ್ರಾಮದ ಪೆರ್ಲದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಸನ್ನಿವೇಶದಲ್ಲಿ ಸುಪ್ರಸಿದ್ಧ ಗಾಂಧಿವಾದಿ ಪೆರ್ಲದ ಗಾಂಧಿ ಎಂದೇ ಜನಜನತರಾದ ಮಹಾಮಾನವತಾವಾದಿಯಾದ ಶ್ರೀ ಪರ್ತಜೆ ವೆಂಕಟ್ರಮಣ ಭಟ್ಟರಿಂದ ೧೯೨೫ನೇ ಇಸವಿಯಲ್ಲಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆ ಹುಟ್ಟಿಕೊಂಡಿತು. ಮುಂದೆ ವಿದ್ಯಾಭಿಮಾನಿಗಳಾದ ಊರಪರವೂರ ಪ್ರಮುಖರ ಸಹಕಾರದೊಂದಿಗೆ ೧೯೪೫ರಲ್ಲಿ ಪ್ರೌಢಶಾಲೆಯಾಗಿ ಕೂಡ ಮೇಲ್ದರ್ಜೆಗೇರಿತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹತ್ತು ಹಲವು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಂಸ್ಥೆಗೆ ಊರಿನ ನಾನಾ ಮೂಲೆಗಳಿಂದ (ಬೇಂಗಪದವು, ನಲ್ಕ, ಖಂಡಿಗೆ, ಪರ್ತಜೆ, ಸ್ವರ್ಗ , ಬೆದ್ರಂಪಳ್ಳ, ಕಜಂಪಾಡಿ, ಉಕ್ಕಿನಡ್ಕ, ಬಣ್ಪುತ್ತಡ್ಕ, ಏಳ್ಕಾನ) ಮಾತ್ರವಲ್ಲ ಪಕ್ಕದ ಊರಿನಿಂದಲೂ ಮಕ್ಕಳು ಶಾಲೆಗೆ ಬರುತ್ತಿದ್ದು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಹೊಂದಿದೆ. ಈ ಸಂಸ್ಥೆಯು ಪಿಟಿಎ, ಎಂಪಿಟಿಎ, ಎಸ್ ಎಸ್ ಜಿಗಳನ್ನು ಹೊಂದಿದ್ದು ವಿದ್ಯಾರಣ್ಯ ವಿದ್ಯಾವರ್ಧಕ ಸಂಘವೆಂಬ ಸಹಕಾರಿ ಮೇಲ್ವಿಚಾರಕ ಸಮಿತಿಯ ಆಶ್ರಯದಲ್ಲಿ ಸರಕಾರದ ಅನುದಾನದೊಂದಿಗೆ ಸುಗಮವಾಗಿ ಮುಂದಡಿಯಿಡುತ್ತಾ ನಾಡಿನ ಶೈಕ್ಷಣಿಕ ಆವಶ್ಯಕತೆಯನ್ನು ಈಡೇರಿಸುವುದರೊಂದಿಗೆ ಮಕ್ಕಳ ಸರ್ವಾಗೀಣ ಬೆಳವಣಿಗೆಯೆಂಬ ತನ್ನ ಗುರಿಯನ್ನು ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ. ಣ

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಪ್ರಸ್ತುತ ಶಾಲೆಯು ಉತ್ತಮ ಭೌತಿಕ ಸೌಕರ್ಯಗಳನ್ನೊಳಗೊಂಡಿದೆ. ತರಗತಿ ಕೋಣೆಗಳು ಸುಸಜ್ಜಿತವಾಗಿವೆ. ಸಾಕಷ್ಟು ಪೀಠೋಪಕರಣಗಳಿವೆ. ನೀರಿನ ವ್ಯವಸ್ಥೆ. ಶೌಚಾಲಯ ವ್ಯವಸ್ಥೆ ಕೂಡಾ ಉತ್ತಮವಾಗಿದೆ. ಶಾಲಾ ಆಟದ ಮೈದಾನವು ತಕ್ಕಮಟ್ಟಿಗೆ ಉತ್ತಮವಾಗಿದೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ವಿವಿಧ ಸಂಘಗಳು, ಕ್ರೀಡಾ ಕೂಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಶಾಲಾ ತರಕಾರಿ ತೋಟ ಅತ್ಯತ್ತಮವಾಗಿ ಮಾಡಲಾಗಿದೆ.

മാനേജ്‌മെന്റ് (ಆಡಳಿತ ವರ್ಗ)

ಶಾಲಾ ಆಡಳಿತ ಸಮಿತಿಯು ಶ್ರೀ ಬಿಜಿ ರಾಮ ಭಟ್ಟರ ನೇತೃತ್ವದಲ್ಲಿ ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಕಾರ್ಯದರ್ಶಿಗಳಾಗಿ ಶ್ರೀಕೃಷ್ಣ ವಿಶ್ವಾಮಿತ್ರ, ಕೋಶಾಧಿಕಾರಿಗಳಾಗಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ಚ ಸರ್ಪಮಲೆ ಶಾಲೆಯ ಬಗ್ಗೆ ಬಹಳ ಮುತುವರ್ಜಿಯಿಂದ ಕಾರ್ಯವೆಸಗುತ್ತಿದ್ದಾರೆ.

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಪರ್ತಜೆ ವೆಂಕಟ್ರಮಣ ಭಟ್ಟ, ವೈ ಸಂಕಪ್ಪ ಅಡ್ಯಂತಾಯ, ಸಿ ಎಚ್ ಗೋವಿಂದ ನಾಯ್ಕ, ಯು ಸೀತು, ಮದನ ಶೆಟ್ಟಿ, ರಘುರಾಮ ಆಳ್ವ, ಸೋಮಾಜೆ ಗೋಪಾಲಕೃಷ್ಣ ಭಟ್ಟ


പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

ಪುತ್ತೂರು ವಿಧಾನಸಭಾಾ ಮಂಡಲದ ಶಾಸಕರಾದ ಟಿ ಶಕುಂತಳಾ ಶೆಟ್ಟಿ, ಊರಿನ ಗಣ್ಯರಾದ ಬಿಜಿ ರಾಮ ಭಟ್ಟ ಮೊದಲಾದವರು

വഴികാട്ടി ( ಮಾರ್ಗದರ್ಶಿ )

ಕಾಸರಗೋಡು ಜಿಲ್ಲೆಯ ಬದಿಯಡ್ಕ ಪುತ್ತೂರು ರಾಜ್ಯ ಹೆದ್ದಾರಿಯಲ್ಲಿರುವ ಪೆರ್ಲ ಪೇಟೆಯ ಸಮೀಪದಲ್ಲಿಯೇ ಇದೆ.

Loading map...