എസ്. എ.ടി.എച്ച്.എസ്. മഞ്ചേശ്വർ/പ്രവർത്തനങ്ങൾ/2024-25

Schoolwiki സംരംഭത്തിൽ നിന്ന്
2022-23 വരെ2023-242024-25

2024 JUNE MONTH ACTIVITY

ಎಸ್‌.ಎ.ಟಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ದಳದ ವತಿಯಿಂದ ಆಚರಿಸಿದ ವಿಶ್ವ ಪರಿಸರ ದಿನಾಚರಣೆ ಸಂಭ್ರಮ.
Club inauguration 2024
Club Inaugration 2024ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ  ಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮಎಸ್ ಎ ಟಿ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ  ವಿವಿಧ ಕ್ಲಬ್ ಉದ್ಘಾಟನಾ ಸಮಾರಂಭವು ಪ್ರಭಾರ ಮುಖ್ಯೋಪಾಧ್ಯಾಯ ಪೂರ್ಣಯ್ಯ ಪುರಾಣಿಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ  ಪ್ರೌಢ ಶಾಲಾ ಎಸ್ ಆರ್ ಜಿ ಕನ್ವೀನರ್ ಗಣೇಶ್ ಪ್ರಸಾದ್ ನಾಯಕ್ ಮತ್ತು ಯು.ಪಿ ವಿಭಾಗದ ಎಸ್ ಆರ್ ಜಿ ಕನ್ವೀನರ್ ಅಜಿತ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. ಮಕ್ಕಳ ವಿಜ್ಞಾನ ಪ್ರಯೋಗದ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಮಾದಕ ವಿರೋಧಿ ಸಮಿತಿಯ ಸದಸ್ಯತ್ವ ಕಾರ್ಡನ್ನು ಮಕ್ಕಳಿಗೆ ವಿತರಿಸಲಾಯಿತು ಮತ್ತು ಮಾದಕ ವಿರೋಧಿ ದಿನದ ರಸಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಲಾಯಿತು.  ವಿವಿಧ ಕ್ಲಬ್‌ಗಳ ವಿದ್ಯಾರ್ಥಿಗಳು  ವಿಷಯಾಧಾರಿತ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳಾದ ಮಯೂರ,ಅನ್ವಿತಾ ಮೇಘ, ಧೃತಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ  ಎಸ್ ಎ ಟಿ ಶಾಲೆಯಲ್ಲಿ  ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ  ಯೋಗ ದಿನ ಆಚರಣೆಯನ್ನು  ನಡೆಸಲಾಯಿತು. ಯೋಗ ತರಬೇತಿ ಪಡೆದ  ಅಧ್ಯಾಪಕರಾದ   ಈಶ್ವರ ಕಿದೂರು  ಹಾಗೂ   ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.
Anti Drugs programme 2024
ಮಾದಕ ವಿರೋಧಿ ದಿನದ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ಪೋಸ್ಟರ್ ರಚನೆ  ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.
ನಮ್ಮ ನಡೆ ಕೃಷಿಯ ಕಡೆಈಗಿನ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್ ಏ ಟಿ ಶಾಲೆಯ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ತಾರೀಕು ಇಂದು ಶ್ರೀಮತ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ನೇಜಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 50 ಮಂದಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿಕೊಂಡು ಗದ್ದೆಯಲ್ಲಿ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಸದಾಶಿವ ಮೂಲ್ಯ ಇವರು ಕೃಷಿಯ ಕುರಿತು ಮಾಹಿತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ ಯನ್ನು ನಡೆಸಿದರು. ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿ ದಾಸ್ ಪ್ರಭು ಹಾಗೂ ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ ಟಿ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.
ನಮ್ಮ ಶಾಲೆಯಲ್ಲಿ ಮಕ್ಕಳನ್ನು ಕರೆತರುವ ವಾಹನ ಚಾಲಕರ ಸಭೆಯನ್ನು ನಡೆಸಲಾಯಿತು..ಸಾರಿಗೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಕ್ಕಳ ಸುರಕ್ಷತೆಯ ಕುರಿತಾದ ಮಾಹಿತಿಯನ್ನು ನೀಡಿದರು..
Rabis ವಿರುದ್ಧ ಜಾಗೃತಿ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯಿತು..
ಶ್ರೀಮತ್ ಅನಂತೇಶ್ವರ ದೇವಳದ ಶಾಲೆಗೆ ದೇವಸ್ಥಾನದ ಕೋಶಾಧಿಕಾರಿಗಳಾದ ಶ್ರೀ ಪ್ರಶಾಂತ್ ಪೈ ಕೊಡಮಾಡಿದ 'ಕುಡಿಯುವ ನೀರಿನ ಕೂಲರ್' ಉದ್ಘಾಟನೆ.
ಶ್ರೀಮದ್ ಅನಂತೇಶ್ವರ ಶಾಲೆಯ ಪ್ರೀ ಪ್ರೈಮರಿ ವಿಭಾಗದ ಹೊಸ ಕೊಠಡಿಯನ್ನು ಶ್ರೀ ಸಂದೇಶ ಉದ್ಯಾವರ್ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯ ಇವರು ಉದ್ಘಾಟಿಸಿದರು..
ಶ್ರೀಮತ್ ಅನಂತೇಶ್ವರ ದೇವಳದ ಶಾಲೆಯ ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ 'ಹೆಸರಿನ ಲೇಬಲ್‌' ಬಿಡುಗಡೆ..