ജി യു പി എസ് നുള്ളിപ്പാടി/അക്ഷരവൃക്ഷം/ ಅತಿಯಾಸೆಯ ಫಲ.Athiyaaseya fala

Schoolwiki സംരംഭത്തിൽ നിന്ന്
ಅತಿಯಾಸೆಯ ಫಲ.Athiyaaseya fala

ರಾಮಪುರ ಎಂಬ ಗ್ರಾಮದಲ್ಲಿ ಸುಬ್ಬ ಎಂಬ ಒಬ್ಬ ಕುಂಬಾರ ನಿದ್ದನು. ಅವನು ಒಂದುದಿನ ಮಡಿಕೆ ಮಾಡಲು ಆವೆ ಮಣ್ಣು ತರಲು ಹೋದನು. ಮಣ್ಣು ಅಗೆಯುವಾಗ ಅವನಿಗೆ ಹೊಳಪಾದ ವಸ್ತುವೊಂದು ಕಂಡಿತು. ಅವನು ಅದನ್ನು ಮೇಲಕ್ಕೆ ಎತ್ತಿದನು. ಅದು ಒಂದು ಚಿನ್ನದ ಪಾತ್ರವಾಗಿತ್ತು. ಅವನು ಬಹಳ ಖುಷಿಯಿಂದ ಅದನ್ನು ಮನೆಗೆ ತೆಗೆದುಕೊಂಡು ಹೋದನು. ಅದರೊಳಗೆ ಕೈ ಹಾಕಿದಾಗ ಅವನಿಗೆ ಒಂದು ಕಾಗದದ ಚೀಟಿ ಸಿಕ್ಕಿತು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು "ಇದರಲ್ಲಿ ಯಾವುದೇ ವಸ್ತು ಹಾಕಿದರೂ ಅದು ಮೂರುಪಟ್ಟು ಹೆಚ್ಚಾಗುತ್ತದೆ, ಆದರೆ ಅತಿಯಾಸೆಯಿಂದ ಇದನ್ನು ದುರುಪಯೋಗ ಮಾಡಿದರೆ ಈ ಪಾತ್ರೆ ಮಾಯವಾಗುತ್ತದೆ" ಎಂದು. ಕುಂಬಾರನು ಒಂದು ನಾಣ್ಯವನ್ನು ಆ ಪಾತ್ರೆಯಲ್ಲಿ ಹಾಕಿದನು. ಆಗ ಅದು ಮೂರು ನಾಣ್ಯಗಳಾಗಿ ಬದಲಾಯಿತು. ಇದನ್ನ ನೋಡಿದ ಅವನು ಚೀಟಿಯಲ್ಲಿ ಬರೆದಿರುವುದನ್ನು ಮರೆತು ತನ್ನಲ್ಲಿದ್ದ ಹಣವನ್ನೆಲ್ಲ ತಂದು ಆ ಪಾತ್ರೆಯಲ್ಲಿ ಹಾಕಿದನು. ಕೂಡಲೇ ಆ ಪಾತ್ರೆ ಮಾಯವಾಯಿತು. ಆಗ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ಅತಿಯಾಸೆಯಿಂದ ತನಗೆ ಆದ ನಷ್ಟವನ್ನು ಚಿಂತಿಸಿ ತನಗೆ ತಾನೇ ಶಪಿಸಿದನು. ನೀತಿ- "ಅತಿಯಾಸೆ ಯು ಯಾವಾಗಲೂ ಒಳ್ಳೆಯದಲ್ಲ "ಎಂಬ ಪಾಠ ಎಲ್ಲರಿಗೂ ನೆನಪಿರಲಿ.!!

JITHESHRAJ K
4 A GUPS NULLIPADY
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - കഥ