ജി.എച്ച്.എസ്. എസ്. ബേകൂർ/അക്ഷരവൃക്ഷം/ Ati Ahase Gatigedu

Schoolwiki സംരംഭത്തിൽ നിന്ന്
Ati Ahase Gatigedu
ಅತೀ ಆಸೆ ಗತಿಗೇಡು

ರಾಮು ಮತ್ತು ಸೋಮು ತುಂಬಾ ಆತ್ಮೀಯ ಗೆಳೆಯರಾಗಿದ್ದರು. ತಾವು ಚಿಕ್ಕಂದಿನಿಂದಲೇ ಒಟ್ಟಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ರಾಮು ಅತೀವ ಬುದ್ದಿವಂತ ಮತ್ತು ಒಳ್ಳೆಯವನು ಆಗಿದ್ದನು.ಆದರೆ ಸೋಮು ಬಹಳ ಸೋಮಾರಿಯಾಗಿದ್ದನು.ಇಬ್ಬರೂ ದೊಡ್ಡವರಾದರು. ರಾಮು ಸೋಮುವಿನಲ್ಲಿ ನಾವಿಬ್ಬರೂ ಸೇರಿ ಕೃಷಿಕರಾಗೋಣ ಎಂದಾಗ ಸೋಮು ಅದಕ್ಕೆ ತಲೆಬಾಗಿದನು. ಇಬ್ಬರೂ ಒಂದುಗೂಡಿ ಕೃಷಿ ಬೆಳೆದು ಉತ್ತಮ ಫಸಲಿನ ಮೂಲಕ ಬಹಳಷ್ಟು ಆದಾಯವನ್ನು ಸಂಪಾದಿಸಿದರು. ಬಂದ ಆದಾಯವನ್ನು ಇಬ್ಬರೂ ಸಮಾನಾಗಿ ಹಂಚಿಕೊಂಡು ತಂತಮ್ಮ ಮನೆಗಳಿಗೆ ಸಾಗಿದರು.ರಾಮು ಮನೆಗೆ ಬಂದಾಗ ಆತನ ಪತ್ನಿ ಆತನನ್ನು ಕಂಡು ಅತೀವ ಆನಂದಪಟ್ಟಳು.ಆದರೆ ಸೋಮುವಿನ ಹೆಂಡತಿ ಬೇಸರದಿಂದ ನೀವು ಆ ರಾಮುವಿಗಿಂತಲೂ ಅಧಿಕ ಹಣ ಪಡೆಯಬೇಕು ಎಂದು ಹೇಳುತ್ತಾಳೆ. ಅದರಂತೆಯೇ ಸೋಮು ಮುಂದಿನ ಕೃಷಿಕಾಯಕದಲ್ಲಿ ಸೋಮಾರಿತನವನ್ನು ತೋರಿದ.ಇದನ್ನು ನೋಡಿದ ರಾಮು ತನ್ನ ಗೆಳೆಯನಿಗೆ ಕೆಲಸ ಮಾಡಿ ಸುಸ್ತಾಗಿರಬೇಕೆಂದುಕೊಂಡು ಸುಮ್ಮನಿದ್ದ.ಒಂದು ದಿನ ರಾತ್ರಿ ಸೋಮು ಮತ್ತು ಅವನ ಹೆಂಡತಿ ರಾಮುವಿನ ಕೃಷಿ ತೋಟಕ್ಕೆ ಬಂದು ಹಲವಾರು ಬೆಳೆಗಳನ್ನು ಕದ್ದು ಮನೆಗೆ ಒಯ್ದರು. ಮಾರನೆ ದಿನ ಬೆಳಗ್ಗೆ ತೋಟಕ್ಕೆ ಬಂದ ರಾಮು ಕೃಷಿಬೆಳೆಗಳಲ್ಲಾದ ವ್ಯತ್ಯಾಸವನ್ನು ಕಂಡು ಬಹಳ ದು:ಖಿತನಾದ. ಒಂದೆರಡು ದಿನ ಇದೇ ರೀತಿ ಮುಂದುವರಿದಾಗ ಅನುಮಾನಗೊಂಡ ರಾಮು ಇದು ಕಾಡುಪ್ರಾಣಿಗಳ ಕಾಟವಲ್ಲವೆಂಬುದನ್ನು ಮನಗಂಡನು.ತೋಟದಲ್ಲಾಗುವ ವ್ಯತ್ಯಾಸ ತಿಳಿಯಲು ಒಂದು ಉಪಾಯವನ್ನು ಹೂಡಿದನು. ಅದಕ್ಕಾಗಿ ತೋಟದ ಪ್ರವೇಶದ್ವಾರದ ಸಮೀಪ ಒಂದು ಹೊಂಡವನ್ನು ಮಾಡಿ ಯಾರೂ ತಿಳಿಯದಂತೆ ತರಗೆಲೆಗಳಿಂದ ಅದನ್ನು ಮುಚ್ಚಿದನು. ಇದನ್ನರಿಯದೇ ಎಂದಿನಂತೆಯೇ ರಾತ್ರಿ ಹೊತ್ತಿನಲ್ಲಿ ಬಂದ ಸೋಮು ಮತ್ತು ಆತನ ಪತ್ನಿ ಹೊಂಡದಲ್ಲಿ ಬಿದ್ದು ಹೊರಳಾಡಿದರು. ಮರುದಿನ ಬೇಗನೆ ಎದ್ದು ತೋಟಕ್ಕೆ ಬಂದ ರಾಮು ಹೊಂಡದಲ್ಲಿ ಬಿದ್ದ ತನ್ನ ಗೆಳೆಯನ್ನು ಕಂಡು ಆಶ್ಚರ್ಯಗೊಂಡು ಬಹಳ ಬೇಸರ ವ್ಯಕ್ತಪಡಿಸಿದನು. ಆ ಕ್ಷಣದಲ್ಲಿ ತನ್ನ ತಪ್ಪನ್ನರಿತ ಸೋಮು ರಾಮುವಿನಲ್ಲಿ ಕ್ಷಮೆಯಾಚಿಸಿದ.

Kavya A
10 A ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ