ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕೊರೋನಾ ವೈರಸ್

Schoolwiki സംരംഭത്തിൽ നിന്ന്
ಕೊರೋನಾ ವೈರಸ್

2019ರಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಮಳೆಗಾಲದಲ್ಲಿ ಪ್ರವಾಹಕ್ಕೆ ಅಪಾರ ನಾಶನಷ್ಟಗಳುಂಟಾದುವು. ಆಗೆಲ್ಲ ನಾವು ಧೈರ್ಯದಿಂದ ಕಷ್ಟಗಳನ್ನು ಎದುರಿಸಿದೆವು. ಈಗ 2020ರ ಆರಂಭದಲ್ಲೇ ನಮಗೆಲ್ಲ ಗೊತ್ತಿರುವಂತೆ ಕೊರೋನಾವು ಜಗತ್ತಿನ ಒಂದೊಂದು ದೇಶವನ್ನೂ ಬೇಟೆಯಾಡುವುದಕ್ಕಾಗಿ ಹೊರಟಂತಿದೆ. ಕೊರೋನಾ ವೈರಸ್ ಅಥವಾ ಕೋವಿಡ್‌ 19 ಎಂದು ಕರೆಯಲಾಗುವ ಈ ಕಾಯಿಲೆಯು ಬಹಳ ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ. ಇದುವೇ ಈ ವೈರಸ್‌ನ ಭೀಕರತೆಗೆ ಕಾರಣವಾಗಿದೆ. ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಈ ವೈರಸ್ ಇಂದು ಭಾರತವನ್ನು ವ್ಯಾಪಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಹಳ ಬೇಗನೆ ಹರಡುತ್ತಿದೆ. ಇದಕ್ಕೆ ಕಾರಣ ಜನರ ಅಶ್ರದ್ಧೆ. ಸರಕಾರವು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಜನರು ಸಹಕರಿಸದಿದ್ದಾಗ ಈ ರೋಗವು ಕಾಡ್ಗಿಚ್ಚಿನಂತೆ ಹರಡುವುದನ್ನು ನಾವು ಈಗಾಗಲೇ ಕಂಡಿದ್ದೇವೆ. ಈ ಕಾಯಿಲೆಯನ್ನು ತಡೆಗಟ್ಟದಿದ್ದರೆ ಇದು ನಮ್ಮ ದೇಶದ ಜನಜೀವನದ ಮೇಲೆ ಬೀರುವ ಪ್ರಭಾವ ಅತ್ಯಂತ ಅಪಾಯಕಾರಿಯಾಗಿರುವುದು. ಇದುವರೆಗೆ ಇದಕ್ಕೆ ಔಷಧಿ ಕಂಡುಹಿಡಿಯಲಾಗಿಲ್ಲ. ಆದುದರಿಂದ ಇದನ್ನು ತಡೆಗಟ್ಟಬೇಕಾದುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಜಗತ್ತಿನಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ ಎರಡು ಲಕ್ಷದತ್ತ ಧಾವಿಸುತ್ತಿದೆ. ಜನರ ರಕ್ಷಣೆಗಾಗಿ ಸರಕಾರವು ಕೈಗೊಳ್ಳುವ ಪ್ರತಿಯೊಂದು ತೀರ್ಮಾನವನ್ನು ಪ್ರತಿಯೊಬ್ಬರೂ ಪಾಲಿಸೋಣ. ಸಾವಿನ ಓಟಕ್ಕೆ ಕಡಿವಾಣ ಹಾಕೋಣ.

ಲಾವಣ್ಯ ಬಿ ಆರ್
9 ಕನ್ನಡ ജി.എച്ച്.എസ്. എസ്. ബന്തടുക്ക
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - ലേഖനം