എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/അക്ഷരവൃക്ഷം/ ಮಹಾಮಾರಿ ಕೊರೋನ

Schoolwiki സംരംഭത്തിൽ നിന്ന്
ಮಹಾಮಾರಿ ಕೊರೋನ
 


ಬಂದಿದೆ ಕೊರೋನ ಮಹಾಮಾರಿಯು
ಭೂಮಿಯನಿಂದು ಬೆದರಿಸಿದೆ
ಎಲ್ಲಿ ನೋಡಿದರೂ ಹಾಹಾಕಾರ
ಇಡೀ ವಿಶ್ವಕೇ ದುಃಖಕರ

ಪ್ರಕೃತಿಯ ಶೋಷಣೆ ಮಾಡುವ ಮನುಜಗೆ
ಪ್ರಕೃತಿಯೇ ಶಿಕ್ಷೆಯ ಕೊಡುತಿದೆಯೋ?
ಗಿಡ ಮರ ಪಕ್ಷಿ ಪ್ರಾಣಿಗಳೆಲ್ಲವೂ
ಮನುಜನ ನೋಡಿ ನಗುತುದೆಯೋ?

ವೈದ್ಯರು ವಿಜ್ಞಾನಿಗಳು ಎಲ್ಲರೂ
ಸಂಶೋಧನೆಯನು ಮಾಡುತಿರುವರು
ಪ್ರಕೃತಿಯ ಕೋಪಕೆ ಪರಿಹಾರವಿಲ್ಲದೆ
ಮನುಜರು ಯೋಚಿಸಿ ಪರಿತಪಿಸುವರು.

ಸಾಮಾಜಿಕ ಅಂತರವೇ ಔಷಧಿ
ಅದನೇ ಎಲ್ಲರು ಪಾಲಿಸುವ
ವಿಶ್ವಕೆ ಬಂದ ಮಹಾಮಾರಿಯನು
ಈ ವಿಧಾನದಲೇ ಓಡಿಸುವ

ಸರಕಾರದ ನಿರ್ದೇಶವ ಪಾಲಿಸಿ
ಮನೆಯಲೇ ಎಲ್ಲರು ಇದ್ದುಬಿಡೋಣ
ಪುರಾಣ ಕಥೆಗಳ ದೂರದರ್ಶನದಿ
ನೋಡುತ ಸಮಯವ ಕಳೆಯೋಣ

ಮನೆಯಲೇ ಇದ್ದು ನಮ್ಮನು ರಕ್ಷಿಸಿ
ಇತರರನೂ ನಾವು ರಕ್ಷಿಸುವ
ವಿಶ್ವದ ಎಲ್ಲರೂ ಬದುಕಿ ಉಳಿಯಲೆಂದು
ಭಗವಂತನಲಿ ಪ್ರಾರ್ಥಿಸುವ.

Pavanram N (ಪವನ್ ರಾಮ್ ಯನ್)
5 A എ യു പി എസ് ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Sathish.ss തീയ്യതി: 20/ 06/ 2020 >> രചനാവിഭാഗം - കവിത