ಚಿಗುರಿನ ಚೆಲುಮೆ
ಬೆವರಿನ ಪರಿಮಳ ಸೂಸುವ ಮಣ್ಣು...
ವೀರಾಧಿವೀರರು ಜನಿಸಿದ ಮಣ್ಣು...
ತಿಳಿದಿರೇ ಇದರ ವೈಶಿಷ್ಟವನು???
ಮಣ್ಣೆಂದರೆ ಕೇವಲ ಮಣ್ಣಾಗಿ ಉಳಿದಿಲ್ಲ...
ಇದು ಅನೇಕ ಮಹಾತ್ಮರ ತಾಣ
ತಂಪಿನಿಂದ ಕೂಡಿದ ಈ ಮಣ್ಣು
ಸರ್ವರಿಗೂ ನೀನೇ ಆಶ್ರಯ ತಾಣ...
ಬಿಟ್ಟರೆ ತಗುಲದೇ ನಮ್ಮಯ ಬಾಣ...
ನಿನ್ನಿಂದಲೆ ಚಿಗುರು ನಿನ್ನಿಂದಲೆ ಚೆಲುಮೆ
ನೀನೇ ನಮ್ಮಯ ಆದಿ-ಅಂತ್ಯ
ಅಂತೂ ನಿನ್ನ ಮೇಲೆ ದೌರ್ಜನ್ಯವೇಕೆ????